Advertisement

Video: ಬುಡಕಟ್ಟು ವ್ಯಕ್ತಿಯ ಮೇಲೆ ಮೂರ್ತವಿಸರ್ಜನೆ- ವ್ಯಾಪಕ ಆಕ್ರೋಶ

09:09 AM Jul 05, 2023 | Team Udayavani |

ಭೋಪಾಲ್‌: ಬುಡಕಟ್ಟು ಸಮುದಾಯದ ಕಾರ್ಮಿಕರೊಬ್ಬರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ವರದಿಯಾಗಿದೆ. ಅಲ್ಲದೇ, ವ್ಯಕ್ತಿಯ ಈ ಅನಾಗರಿಕ ವರ್ತನೆಯ ವಿಡಿಯೋ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು , ಘಟನೆ ಬಗ್ಗೆ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ.

Advertisement

ಪ್ರವೇಶ್‌ ಶುಕ್ಲಾ ಎಂಬಾತನು ಬುಡಕಟ್ಟು ಕಾರ್ಮಿಕರಾದ ಪಲೇಕೋಲ್‌ ಎಂಬವರ ಮೇಲೆ ಮೂತ್ರ ವಿರ್ಸರ್ಜಿಸಿ, ಅದನ್ನು ವಿಡಿಯೋ ಕೂಡ ಮಾಡಿದ್ದ. 6 ದಿನಗಳ ಹಿಂದಿನ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್‌ ಆದ ಬಳಿಕ, ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಗಮನಕ್ಕೂ ಬಂದಿದೆ. ಕೂಡಲೇ ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅನ್ವಯ ಕೇಸು ದಾಖಲಿಸಲು ಸಿಎಂ ಪೊಲೀಸರಿಗೆ ಆದೇಶಿಸಿದ್ದಾರೆ.

ಈ ಬಗ್ಗೆ ಎಚ್ಚೆತ್ತುಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರವೇಶ್‌ ಶುಕ್ಲಾನನ್ನು ಬಂಧಿಸಿದ್ದಾರೆ. ಕೃತ್ಯವೆಸಗಿರುವ ವ್ಯಕ್ತಿ  ಬಿಜೆಪಿ ಶಾಸಕ ಕೇದಾರ್ ಶುಕ್ಲಾ ಅವರ ಆಪ್ತ ಎಂದು ರಾಜ್ಯದ ಪ್ರತಿಪಕ್ಷಗಳು ಆರೋಪಿಸಿವೆ. ಇದಲ್ಲದೆ ಕೇದಾರ್ ಶುಕ್ಲಾ ಆರೋಪಿ ಜೊತೆಗಿನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ  ಎನ್ನಲಾಗಿದೆ. ಆದರೆ ಈ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಎಂದು ಬಿಜೆಪಿ  ಹೇಳಿದೆ.

ಆದರೆ, ಪ್ರವೇಶ್ ಶುಕ್ಲಾ ಅವರ ತಂದೆ ರಮಾಕಾಂತ್ ಶುಕ್ಲಾ ತನ್ನ ಮಗ ಕೇದಾರ್ ಶುಕ್ಲಾ ಅವರ ಪ್ರತಿನಿಧಿ ಎಂದು ಹೇಳಿದ್ದಾರೆ. ‘‘ಅವರು ಬಿಜೆಪಿ ಶಾಸಕರ ಪ್ರತಿನಿಧಿಯಾಗಿರುವುದರಿಂದ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ” ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next