Advertisement

Excise scam; ಇ.ಡಿ.ವಿಚಾರಣೆಗೆ ಗೈರಾಗಲು ಕೇಜ್ರಿವಾಲ್‌ ನಿರ್ಧಾರ?

12:48 AM Feb 02, 2024 | Team Udayavani |

ಹೊಸದಿಲ್ಲಿ: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಮತ್ತೂಮ್ಮೆ ಜಾರಿ ನಿದೇಶನಾಲಯ (ಇ.ಡಿ.) ಸಮನ್ಸ್‌ ತಪ್ಪಿಸಿಕೊಳ್ಳುವ ಸಾಧ್ಯತೆಗಳಿವೆ. ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್‌ ತನಿಖೆ ಎದುರಿಸಬೇಕಾಗಿತ್ತು. ಆದರೆ ಈ ಬಾರಿಯೂ ಕೇಜ್ರಿವಾಲ್‌ ತನಿಖೆಯನ್ನು ತಪ್ಪಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 4 ನಾಲ್ಕು ತಿಂಗಳಲ್ಲಿ ಕೇಜ್ರಿವಾಲ್‌ಗೆ ಇ.ಡಿ. 4 ಬಾರಿ ಸಮನ್ಸ್‌ ನೀಡಿತ್ತು. ಈ ನಾಲ್ಕೂ ಸಮನ್ಸ್‌ಗಳನ್ನು ಕೇಜ್ರಿವಾಲ್‌ ತಪ್ಪಿಸಿಕೊಂಡಿದ್ದಾರೆ. ಹೀಗಾಗಿ ಕೇಜ್ರಿವಾಲ್‌ಗೆ ಇ.ಡಿ. ಐದನೇ ಬಾರಿಗೆ ಸಮನ್ಸ್‌ ನೀಡಿತ್ತು. ಸಮನ್ಸ್‌ನಲ್ಲಿ ಕೇಜ್ರಿವಾಲ್‌ ಅವರಿಗೆ ಫೆ.2ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next