Advertisement

Excise Scam: ಅಬಕಾರಿ ಹಗರಣ: ಕೇಜ್ರಿವಾಲ್‌ಗೆ ಸಮನ್ಸ್‌

09:47 PM Apr 14, 2023 | Team Udayavani |

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧಿಸಿ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಸಮನ್ಸ್‌ ಜಾರಿಗೊಳಿಸಿದೆ. ಈಗಾಗಲೇ ಇದೇ ಪ್ರಕರಣದಲ್ಲಿ ಮಾಜಿ ಉಪಮುಖ್ಯ ಮಂತ್ರಿ ಮನೀಷ್‌ ಸಿಸೋಡಿಯಾ ಸಿಬಿಐ ಹಾಗೂ ಇಡಿಯಿಂದ ತನಿಖೆ ಎದುರಿಸುತ್ತಿದ್ದಾರೆ.

Advertisement

ಈ ನಡುವೆಯೇ ಕೇಜ್ರಿವಾಲ್‌ಗ‌ೂ ಸಮನ್ಸ್‌ ಜಾರಿಗೊಂಡಿದ್ದು, ಏ.16ರ ಭಾನುವಾರ ಅವರು ಸಿಬಿಐ ವಿಚಾರಣೆಗೆ ಹಾಜರಾಗಬೇಕಿದೆ. ಸಮನ್ಸ್‌ ಜಾರಿಯಾಗುತ್ತಿದ್ದಂತೆ ಆಪ್‌ ಪತ್ರಿಕಾಗೋಷ್ಠಿ ನಡೆಸಿದ್ದು, ಇಂಥ ಸುಳ್ಳು ಬೆದರಿಕೆಗಳಿಗೆಲ್ಲ ಕೇಜ್ರಿವಾಲ್‌ ಹೆದರುವುದಿಲ್ಲ ಎಂದಿದೆ. ಆಪ್‌ ನಾಯಕ ಸಂಜಯ್‌ ಸಿಂಗ್‌ ಕೂಡ ಟ್ವೀಟ್‌ ಮಾಡಿದ್ದು, ಅನಾಚಾರದ ಅಂತ್ಯ ಖಂಡಿತವಾಗಿಯೂ ಆಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next