Advertisement

ನಿವೃತ್ತಿ ಬಳಿಕವೂ ವಂಜಾರಾಗೆ ಐಜಿಪಿಯಾಗಿ ಬಡ್ತಿ

11:32 PM Feb 26, 2020 | Hari Prasad |

ಅಹ್ಮದಾಬಾದ್‌: ಉಪ ಪೊಲೀಸ್‌ ಮಹಾ ನಿರೀಕ್ಷಕರಾಗಿ (ಡಿಐಜಿಪಿ) ನಿವೃತ್ತರಾಗಿದ್ದ ಡಿ.ಜಿ. ವಂಜಾರಾರಿಗೆ, ಗುಜರಾತ್‌ ಸರಕಾರ ಪೊಲೀಸ್‌ ಮಹಾ ನಿರೀಕ್ಷಕರಾಗಿ (ಐಜಿಪಿ) ಭಡ್ತಿ ನೀಡಿದೆ. ಅದೂ ನಿವೃತ್ತಿಯಾಗಿದ್ದ 6 ವರ್ಷದ ತರುವಾಯ!

Advertisement

ಅವರು, ಸೊಹ್ರಾಬುದ್ದೀನ್‌ ಶೇಖ್‌, ಇಶ್ರತ್‌ ಜಹಾನ್‌ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಆದ್ದರಿಂದ 2007ರಲ್ಲೇ ಅವರನ್ನು ಅಮಾನತು ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅವರು ಗುಜರಾತ್‌ ಎಟಿಎಸ್‌ ಮುಖ್ಯಸ್ಥರಾಗಿದ್ದರು. ಅನಂತರ ಮತ್ತೆ ಕರ್ತವ್ಯಕ್ಕೆ ಮರಳಿದ್ದರು.

2017ರಲ್ಲಿ ಅವರ ವಿರುದ್ಧವಿದ್ದ ಎರಡೂ ಪ್ರಕರಣಗಳು ಸುಳ್ಳು ಎಂದು ಸಿಬಿಐ ನ್ಯಾಯಾಲಯದಲ್ಲಿ ಸಾಬೀತಾಗಿದ್ದವು. ಇದನ್ನು ಪರಿಗಣಿಸಿರುವ ಸರಕಾರ ಅವರಿಗೆ ಭಡ್ತಿ ನೀಡಿದೆ. ಅದನ್ನು ಸ್ವತಃ ವಂಜಾರಾ ಟ್ವೀಟ್‌ ಮೂಲಕ ಬಹಿರಂಗಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next