Advertisement

ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರತಿ ಸಾವಿನ ಆಡಿಟ್: ಸಚಿವ ಸುಧಾಕರ್

03:44 PM Jun 13, 2020 | keerthan |

ರಾಯಚೂರು: ರಾಜ್ಯದಲ್ಲಿ ಕೋವಿಡ್-19 ವೈರಸ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪ್ರತಿ ಸಾವಿನ ಆಡಿಟ್ ಮಾಡಲಾಗುತ್ತಿದೆ ಎಂದು ವೇದ್ಯಕೀಯ ಸಚಿವ ಡಾ.ಕೆ.ಸುಧಾಕರ ತಿಳಿಸಿದರು.

Advertisement

ನಗರದ ಜಿ.ಪಂ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದಕ್ಕೆಂದೆ ತಜ್ಞ ವೈದ್ಯರ ತಂಡ ರಚಿಸಲಾಗಿದೆ. ಯಾವುದೇ ಕಾರಣಕ್ಕೂ ಸಾವು ಸಂಭವಿಸಿದರೂ ಅದರ ತನಿಖೆ ನಡೆಸಿ ವರದಿ ನೀಡುವಂತೆ ತಿಳಿಸಲಾಗಿದೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್-19 ನಿಯಂತ್ರಣದಲ್ಲಿದ್ದು ಭಯ ಪಡುವ ಅಗತ್ಯವಿಲ್ಲ. ಈವರೆಗೆ ಪತ್ತೆಯಾದ ಪಾಸಿಟಿವ್ ಪ್ರಕರಣಗಳಲ್ಲಿ ಶೇ.42ರಷ್ಟು ಗುಣಮುಖವಾಗಿದೆ. ಶೇ.95ರಷ್ಟು ರೋಗಿಗಳಿಗೆ ಕಾಯಿಲೆ ಲಕ್ಷಣಗಳೇ ಇಲ್ಲ. ಶೇ.5 ರಷ್ಟು ರೋಗಿಗಳು ಮಾತ್ರ ತೀವ್ರತರ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದರು.

ವೈದ್ಯರು ಸ್ವಪ್ರೇರಣೆಯಿಂದ ಕೋವಿಡ್ 19 ಕೆಲಸಕ್ಕೆ ಹಾಜರಾಗಬೇಕು. ಸೇವೆಯಿಂದ ಉದ್ದೇಶ ಪೂರಕವಾಗಿ ವಿಮುಖರಾದರೆ ಮಾತ್ರ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ರಾಜ್ಯದಲ್ಲಿ ಎಲ್ಲಿಯೂ ಕೋವಿಡ್-19 ಕೆಲಸಕ್ಕೆ ನಿಯೋಜನೆಗೊಂಡವರಿಗೆ ಸೋಂಕು ತಗುಲಿಲ್ಲ. ಆದರೆ, ರಿಮ್ಸ್ ನಲ್ಲಿ ನಾಲ್ವರು ನರ್ಸ್ ಗಳಿಗೆ ಹೇಗೆ ಬಂತು ಎಂಬ ವಿವರ ನೀಡುವಂತೆ ರಿಮ್ಸ್ ನಿರ್ದೇಶಕರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next