Advertisement

ಮುನಿಸು ಶಮನ ? ಸಿಎಂ ಭೇಟಿ ಆಗುತ್ತೇವೆ ಎಂದ ಈಶ್ವರಪ್ಪ,ಜಾರಕಿಹೊಳಿ

09:31 PM Dec 21, 2022 | Team Udayavani |

ಬೆಳಗಾವಿ: ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿದ್ದ ಶಾಸಕರಾದ ರಮೇಶ ಜಾರಕಿಹೊಳಿ ಹಾಗೂ ಕೆ.ಎಸ್.‌ಈಶ್ವರಪ್ಪ ಅವರು ಬೆಳಗಾವಿಗೆ ವಾಪಸ್ ಆಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಆಗುವುದಾಗಿ ತಿಳಿಸಿದ್ದಾರೆ.

Advertisement

ಈ ಬಗ್ಗೆ ಮಾಧ್ಯಮದವರೊಂದಿಗೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬುಧವಾರ ರಾತ್ರಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕರೆದಿದಕ್ಕೆ‌ ನಾನು ಬಂದಿದ್ದೇನೆ. ಅವರನ್ನು ಇಂದು ಭೇಟಿ ಮಾಡುತ್ತೇನೆ. ನನಗೆ ಯಾವುದೇ ಮಾಹಿತಿ ಇಲ್ಲ
ಅವರು‌ ಮಾತನಾಡಿದ ನಂತರ ಎಲ್ಲವೂ ಗೊತ್ತಾಗಲಿದೆ ಎಂದರು.

ಈ ವಿಚಾರದಲ್ಲಿ ಜಾತಿ ಮಧ್ಯೆ ತರಬೇಡಿ ಎಂದು ಪತ್ರಕರ್ತನ ವಿರುದ್ದ ಗರಂ ಆದ ಕೆ.ಎಸ್. ಈಶ್ವರಪ್ಪ, ಜಾತಿ ತಂದರೆ ನಾನು ಬೈದು ಬಿಡುತ್ತೇನೆ. ಜನರಿಗೆ ಉತ್ತರ ಕೊಡಲು ಆಗದ ಪರಿಸ್ಥಿತಿ ಈಗಲೂ ಇದೆ.‌ನನ್ನ ಪರವಾಗಿ ಕ್ಲೀನ್ ಚೀಟ್ ಸಿಕ್ಕಿ ಆಗಿದೆ. ನನಗೆ ಉತ್ತರ ಕೊಟ್ಟು ಕೊಟ್ಟು ಸಾಕಾಗಿದೆ. ಮುಖ್ಯಮಂತ್ರಿ ಬರಲು ಹೇಳಿದ್ದಾರೆ. ವರು ಏನು ಮಾತನಾಡುತ್ತಾರೆ ನೋಡೋಣ.‌ ನಾನು ಇವತ್ತೇ ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತೇನೆ ಎಂದರು.

ಹೈಕಮಾಂಡ್ ಸಕಾರಾತ್ಮಕವಾಗಿ ಸ್ಪಂದಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನಗೂ ಅದೇ ಸುದ್ದಿ ಸಿಕ್ಕಿದೆ. ಆದರೆ ಯಾವಾಗ ಏನು ಅಂತ ಗೊತ್ತಿಲ್ಲ. ಮುಖ್ಯಮಂತ್ರಿಗಳು ಮಾತಾನಾಡಿದ ಪ್ರಕಾರ ಕೇಂದ್ರ ಪಾಸಿಟಿವ್ ಆಗಿದೆ. ನನಗೆ ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಕೊಡಬೇಕು ಎಂಬುದರ ಬಗ್ಗೆ ಸಕಾರಾತ್ಮಕವಾಗಿದ್ದಾರೆ. ಇಬ್ಬರನ್ನು ಸೇರಿಸಿಕೊಳ್ಳಬೇಕು ಅಂತ ಮಾತಾಡಲು ಕರೆದಿದ್ದಾರೆ ಎಂದರು.

ಖಂಡಿತ ನನಗೆ ನೋವಾಗಿದೆ. 10 ಸಲ ಅದನ್ನೇ ಹೇಳಿದ್ದೇನೆ. ಅವರು ಏಕೆ ಕೊಡಲಿಲ್ಲ ಅಂತ ಗೊತ್ತಿಲ್ಲ.‌ ಎಲ್ಲರೂ ಕರೆ ಮಾಡಿ ಕೇಳುತ್ತಿದ್ದಾರೆ. ಏಕೆ ತೆಗೆದುಕೊಂಡಿಲ್ಲ ಅಂತ ಕಾರಣ ಗೊತ್ತಿಲ್ಲ. ನಮ್ಮನ್ನು ಸಚಿವರಾಗಿ ತೆಗೆದುಕೊಳ್ಳಬೇಕೆಂಬ ಆಸೆ ಮುಖ್ಯಮಂತ್ರಿ ಅವರಿಗೆ ಇದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next