Advertisement
ನಿನ್ನೆ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಗೂ ಈಶ್ವರಪ್ಪ ಗೈರಾಗಿರುವುದು ಭಿನ್ನಮತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಆದರೆ ಈಶ್ವರಪ್ಪ ಅವರು ಮನೆಯಲ್ಲಿ ಪೂಜೆ ಇರುವ ಕಾರಣ ಗೈರಾಗಿದ್ದಾರೆ ಎಂದು ಹೇಳಲಾಗಿದೆ.
ಸಭೆಯಲ್ಲಿ ಮಾತನಾಡಿದ ಡಿ.ವಿ.ಸದಾನಂದ ಗೌಡ ಯಡಿಯೂರಪ್ಪ ಅವರು ನಮ್ಮ ಕ್ಯಾಪ್ಟನ್ ಅವರು ಮಂದಿನ ಮುಖ್ಯಮಂತ್ರಿಯಾಗಬೇಕು ಎಂದರು.
Related Articles
Advertisement
ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರತೀ ಮನೆಗೆ ತಲುಪಿದ್ದಾರೆ. ಅವರು ತಲುಪಿದರೆ ಸಾಲದು ಬಿಜೆಪಿಯ ಪ್ರತೀ ಕಾರ್ಯಕರ್ತರೂ ತಲುಪಬೇಕು ಎಂದರು.
ಇಂದು ಎಲ್ಲವರೂ ನಮ್ಮವರೇ ಮುರಳೀದರರಾವ್ ಮಾತನಾಡಿ 1951 ರಿಂದ ಜನಸಂಘದ ವಿರುದ್ದ ಟೀಕೆ ಮಾಡುತ್ತಾ ಇದ್ದರು. ಕೋಮುವಾದಿ ಎಂದು ಋಣಾತ್ಮಕವಾಗಿ ಮಾತನಾಡುತ್ತಿದ್ದರು. ಆದರೆ ಇಂದು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ , ಸ್ಪೀಕರ್ ಎಲ್ಲವರೂ ನಮ್ಮವರೆ ಆಗಿದ್ದಾರೆ ಎಂದು ಹರ್ಷ ವ್ಯಕ್ತ ಪಡಿಸಿದರು. ಕರ್ನಾಟಕದಲ್ಲಿ ಮುಂದಿನ ವಿಧಾನಸಭೆಯಲ್ಲಿ ಗೆಲುವು ಮಾತ್ರವಲ್ಲ ಭರ್ಜರಿ ಜಯ ನಮ್ಮದಾಗುತ್ತದೆ. ಮಿಷನ್ 150 ಗುರಿ ಸುಲಭವಾಗಿ ತಲುಪುತ್ತೇವೆ ಎಂದರು.