Advertisement

ಮಾಲಿನ್ಯದಿಂದ ಪರಿಸರದ ಮೇಲೆ ದುಷ್ಪರಿಣಾಮ

11:17 AM Mar 23, 2018 | Team Udayavani |

ಬಾಳೆಹೊನ್ನೂರು: ಪರಿಸರ, ವಾಯು ಹಾಗೂ ಶಬ್ದ ಮಾಲಿನ್ಯದಿಂದ ಜನ ಸಂಖ್ಯೆಯ ಶೇ. 10 ರಷ್ಟು ಜನ ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ ಎಂದು ಭಾರತೀಯ ಜೆ.ಸಿಐ ನ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ವಿಜ್ಞಾನಿ ನವೀನ್‌ ಲಾಯ್ಡ ಮಿಸ್ಕಿತ್‌ ತಿಳಿಸಿದರು.

Advertisement

 ಕಾಫಿ ಸಂಶೋಧನ ಕೇಂದ್ರದ ಆವರಣದಲ್ಲಿ ಸಂಶೋಧನ ಕೇಂದ್ರ ಹಾಗೂ ಬಾಳೆಹೊನ್ನೂರು ಜೆ.ಸಿಐ ಹಮ್ಮಿಕೊಂಡಿದ್ದ ಸ್ವತ್ಛ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಸರ ಮಾಲಿನ್ಯದಿಂದ ಹವಾಮಾನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಮುದ್ರದಲ್ಲೂ ಪ್ಲಾಸ್ಟಿಕ್‌ ತೇಲುತ್ತಿದ್ದು ಕಡಲ ಕಿನಾರೆ ಪ್ಲಾಸ್ಟಿಕ್‌ ನಿಂದ ತುಂಬಿ ತುಳುಕುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೊಳಿಸಿದ ಸ್ವತ್ಛ ಭಾರತ್‌ ಅಭಿಯಾನ ಯಶಸ್ವಿಯಾಗಲು ಪ್ರತಿಯೊಬ್ಬ ನಾಗರೀಕನು ತನ್ನ ಜವಬ್ದಾರಿಯನ್ನು ಅರಿತುಕೊಳ್ಳಬೇಕಿದೆ ಎಂದರು.

ಜೆಸಿಐನ ಅಧ್ಯಕ್ಷ ಮನುಕುಮಾರ್‌ ಮಾತನಾಡಿದರು. ಕಾಫಿ ಸಂಶೋದನ ಕೇಂದ್ರದ ಜಂಟಿ ನಿರ್ದೆಶಕ ಸಿ.ಜೆ. ಆನಂದರಾವ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next