Advertisement

Renukaswamy Case ಆರೋಪಿ ಅನು ತಂದೆ ಚಂದ್ರಪ್ಪ ಸಾವು

11:47 PM Jun 14, 2024 | Team Udayavani |

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಅನಿಲ್‌ಕುಮಾರ್‌(ಅನು) ಪೊಲೀಸರಿಗೆ ಶರಣಾದ ಬೆನ್ನಲ್ಲೇ ಆತನ ತಂದೆ ಚಂದ್ರಪ್ಪ (55) ಕಡಿಮೆ ರಕ್ತದೊತ್ತಡದಿಂದ ಮೃತಪಟ್ಟಿದ್ದಾರೆ.

Advertisement

ಅವರು ಶುಕ್ರವಾರ ಸಂಜೆ ಹಾಲು ತರಲು ಮನೆಯಿಂದ ತುಸು ದೂರ ಹೋಗಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಅಕ್ಕಪಕ್ಕದ ಮನೆಯವರು ಸೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಅನಿಲ್‌ಕುಮಾರ್‌ ತಂದೆ ಗಾರೆ ಚಂದ್ರಪ್ಪ, ತಾಯಿ ಜಯಮ್ಮ, ಅಣ್ಣ ಮಂಜುನಾಥ್‌ ಹಾಗೂ ತಮ್ಮ ಶ್ರೀನಿವಾಸ್‌ ಜತೆಗೆ ಹೊಳಲ್ಕೆರೆ ರಸ್ತೆಯ ಬುರುಜನಹಟ್ಟಿ ಸಿಹಿನೀರು ಹೊಂಡದ ರಸ್ತೆಯಲ್ಲಿರುವ ಶೀಟ್‌ ಹೊದಿಸಿದ ಪುಟ್ಟ ಮನೆಯಲ್ಲಿ ವಾಸವಿದ್ದ. ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಕರೆದೊಯ್ಯುವಾಗ ನಟ ದರ್ಶನ್‌ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರನ ಜತೆಗೆ ತೆರಳಿದ್ದ.

ಪ್ರಕರಣದಲ್ಲಿ ಅನು ಹೆಸರು ಕೇಳಿ ಬಂದಿತ್ತು. ಅನು ಹಾಗೂ ಜಗ್ಗು ಶುಕ್ರವಾರ ಡಿವೈಎಸ್‌ಪಿ ಕಚೇರಿಯಲ್ಲಿ ಶರಣಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next