Advertisement

ಜೀವ ಸಂಕುಲಗಳಿಗೆ ಪರಿಸರವೇ ಆಧಾರ

01:04 PM Jun 10, 2022 | Team Udayavani |

ಶಹಾಬಾದ: ಎಲ್ಲ ಜೀವ ಸಂಕುಲಗಳಿಗೆ ಪರಿಸರವೇ ಮುಖ್ಯ ಆಧಾರವಾದ ಕಾರಣ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ ಹೇಳಿದರು.

Advertisement

ಹಳೆ ಶಹಾಬಾದನ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಅರಣ್ಯ ನಾಶದಿಂದ ಆಮ್ಲಜನಕದ ಕೊರತೆ ಉಂಟಾಗುತ್ತದೆ, ನಮ್ಮ ಸ್ವಾರ್ಥದ ಜೀವನಕ್ಕಾಗಿ ಪರಿಸರ ನಾಶ ಅವ್ಯಾಹತವಾಗಿ ನಡೆಯುತ್ತಿದೆ.ಉತ್ತಮ ಜೀವನಕ್ಕಾಗಿ, ನಾಳಿನ ಪೀಳಿಗೆ ಗೋಸ್ಕರ ಅರಣ್ಯ ಸಂರಕ್ಷಣೆ ಜೊತೆಗೆ ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಿಸಬೇಕು ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಶರಣಗೌಡ ಪಾಟೀಲ ಮತ್ತು ಶಾಂತಪ್ಪ ಹಡಪದ ಮಾತನಾಡಿ, ಅರಣ್ಯ ನಾಶದಿಂದ ಮತ್ತು ಖನಿಜ ಸಂಪನ್ಮೂಲಗಳನ್ನು ಲೂಟಿ ಮಾಡುವ ಮೂಲಕ ಕೆಲವು ಬಲಿಷ್ಠರು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತಿದ್ದಾರೆ. ಪರಿಸರಕ್ಕೆ ಹಾನಿ ಮಾಡುವರಿಗೆ ದಂಡ ವಿಧಿಸಬೇಕು ಎಂದರು.

ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಚಂದನಕೇರಿ, ಮುಖ್ಯಶಿಕ್ಷಕಿ ಅಂಜನಾದೇವಿ ವಸ್ತ್ರದ್‌ ಮಠ, ಸಾಜಿದ್‌ ಗುತ್ತೆದಾರ, ಶಿವಕುಮಾರ ನಾಟೇಕಾರ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next