Advertisement

ಎನ್‌ಕೌಂಟರ್‌: ಉಗ್ರರು, ಬಾಲಕಿ ಸಾವು

03:50 AM Mar 16, 2017 | Team Udayavani |

ಶ್ರೀನಗರ: ಕುಪ್ವಾರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಉಗ್ರರ ವಿರುದ್ಧ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ. ಇದೇ ವೇಳೆ ಅಪ್ರಾಪ್ತ ಬಾಲಕಿಯೋರ್ವಳು  ಮೃತಪಟ್ಟಿದ್ದಾಳೆ. ಬುಧವಾರ ಬೆಳಗಿನ ಜಾವ ಭದ್ರತಾ ಪಡೆಗಳು ಕುಪ್ವಾರದ ಕಾಲಾರೋಸ್‌ ಗ್ರಾಮವನ್ನು ಸುತ್ತುವರಿದಿದ್ದು, ಉಗ್ರರಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಉಗ್ರರು ಗುಂಡು ಹಾರಿಸಿದ್ದು ಪ್ರತಿಯಾಗಿ ಭದ್ರತಾ ಪಡೆಗಳು ದಾಳಿ ನಡೆಸಿವೆ. ಗುಂಡಿನ ಚಕಮಕಿ ವೇಳೆ ಬಾಲಕಿಗೆ ಗುಂಡು ತಗಲಿ ಮೃತಪಟ್ಟಿದ್ದಾಳೆ. ಜತೆಗೆ ಆಕೆಯ ಸಹೋದರ ಫೈಸಲ್‌, ಪೊಲೀಸರಿಗೂ ಗಾಯಗಳಾಗಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next