Advertisement

ಉದ್ಯೋಗ ಖಾತ್ರಿ ಯೋಜನೆ ಅಕ್ರಮ ತನಿಖೆಗೆ ಒತ್ತಾಯ

02:03 PM Jun 07, 2020 | Suhan S |

ಕುಷ್ಟಗಿ: ತಾಲೂಕಿನ ಕ್ಯಾದಿಗುಪ್ಪ ಗ್ರಾಪಂನಲ್ಲಿ 2019-20ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಅಂದಾಜು 7 ಕೋಟಿ ರೂ. ಬೋಗಸ್‌ ಬಿಲ್‌ ಸೃಷ್ಟಿಸಿ ಅಕ್ರಮ ಎಸಗಿದ ಹಿನ್ನೆಲೆಯಲ್ಲಿ ವಿಶೇಷ ತನಿಖಾಧಿಕಾರಿಯನ್ನು ನೇಮಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಪ್ರಕಾಶ ದಾಸರ್‌, ಮಹಾಂತೇಶ ಪಾಟೀಲ ಅವರು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ಅಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಲಾಲಬಿ ಹುಸೇನಸಾಬ್‌ ಬೇವಿನಗಿಡ, ಪಿಡಿಒ, ಜೆಇ, ಕಾರ್ಯದರ್ಶಿ, ಕಂಪ್ಯೂಟರ್‌ ಆಪರೇಟರ್‌ ಭಾಗಿಯಾಗಿ ಅಂದಾಜು 7 ಕೋಟಿ ರೂ. ಕಾಮಗಾರಿ ನಡೆಸದೇ ಬೋಗಸ್‌ ಬಿಲ್ಲುಗಳನ್ನು ಸೃಷ್ಟಿಸಿದ್ದಾರೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಭ್ರಷ್ಟಾಚಾರ ಕುರಿತು ಪೂರಕ ದಾಖಲೆಗಳ ಸಮೇತ ಕುಷ್ಟಗಿ ತಾಪಂ ಹಿಡಿದು, ಜಿಪಂ ಸಿಇಒ, ಓಂಬುಡ್ಸಮನ್‌ ಜಿಪಂ ಕೊಪ್ಪಳ ಅವರಿಗೆ ಮನವಿ ಸಲ್ಲಿಸಿದರೂ ತನಿಖೆಗೆ ಮುಂದಾಗಿಲ್ಲ. ಈ ಅಕ್ರಮದಲ್ಲಿ ಭಾಗಿಯಾದ ಕ್ಯಾದಿಗುಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಲಾಲಬಿ ಬೇಗಂ ಹುಸೇನಸಾಬ್‌ ಬೇವಿನಗಿಡ ಅವರ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next