Advertisement

Emotion; ಪ್ರೊಫೈಲ್ ಫೋಟೋ ಬದಲಾವಣೆ ಮಾಡಿದ ಸಂಸದ ಪ್ರತಾಪ್ ಸಿಂಹ

05:58 PM Mar 20, 2024 | Team Udayavani |

ಮೈಸೂರು: ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಟೆಕೆಟ್ ಕೈತಪ್ಪಿದ ಬಳಿಕ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಪಕ್ಷಕ್ಕೆ ನಿಷ್ಠೆ ತೋರಿ ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಅವರ ಪರ ಪ್ರಚಾರದಲ್ಲಿ ನಿರತರಾಗಿದ್ದು ಈ ವೇಳೆ ಎಕ್ಸ್ ಪ್ರೊಫೈಲ್ ಫೋಟೋ ಬದಲಾವಣೆ ಮಾಡಿ ಟಾಂಗ್ ನೀಡಿದ್ದಾರೆ.

Advertisement

ಬದಲಾವಣೆ ಮಾಡಿದ ಫೋಟೋ ಭಾವನಾತ್ಮಕವಾಗಿದ್ದು, ತಾನು ಕುಳಿತುಕೊಳ್ಳುತ್ತಿದ್ದ ಕುರ್ಚಿಯಲ್ಲಿ ತನ್ನ ಪುತ್ರಿ ಕೈ ಮುಗಿದು ಕುಳಿತಿರುವ ಭಾವುಕ ಕ್ಷಣಕ್ಕೆ ಸಾಕ್ಷಿಯಾಗುವ ಫೋಟೋ ಬದಲಾವಣೆ ಮಾಡಿದ್ದಾರೆ. ನೂರಾರು ಅಭಿಮಾನಿಗಳು ಫೋಟೋಗೆ ನಾನಾ ವ್ಯಾಖ್ಯೆ ನೀಡಿದ್ದಾರೆ.

ಹಲವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ಕುಟುಂಬ ರಾಜಕಾರಣ’, ‘ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ತುಂಬಾ ಒಳ್ಳೆಯ ಮಾರ್ಗ’, ‘ಜೀವನವು ದೀರ್ಘವಾಗಿದೆ… ಈಗ 400 ಪ್ಲಸ್‌ಗಾಗಿ ಕೆಲಸ ಮಾಡಿ’, ಕರ್ನಾಟಕದ ಜನತೆಗೆ ದೊಡ್ಡ ನಷ್ಟ. ಪ್ರಾಮಾಣಿಕವಾಗಿ ದುಡಿಯುವ ಮತ್ತು ಹೆಚ್ಚು ತಿಳಿದ ಸಂಸದ ಸಂಸತ್ತಿನಲ್ಲಿ ಇರುವುದಿಲ್ಲ. ಮೋದಿ 3 ರಲ್ಲಿ ಸೇರ್ಪಡೆಗೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೆಲವು ವಿಷಯಗಳು ಬದಲಾದವು ಎಂದು ಊಹಿಸೋಣ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next