Advertisement

ಆನೆಗಳಿಂದ ಗುಡಿಸಲು ಧ್ವಂಸ: ಇಬ್ಬರು ಮಕ್ಕಳ ದಾರುಣ ಸಾವು

04:54 PM Jun 21, 2018 | udayavani editorial |

ಧನಬಾದ್‌, ಜಾರ್ಖಂಡ್‌ : ಧನಬಾದ್‌ನ ದೊಮುಂಡಾ ಎಂಬಲ್ಲಿ ಕಾಡಾನೆಗಳ ಗುಂಪೊಂದು ಗುಡಿಸಲನ್ನು ಎಳೆದು ನಾಶಮಾಡಿದ ಘಟನೆಯಲ್ಲಿ ಮನೆಯೊಳಗಿದ್ದ ಇಬ್ಬರು ಮಕ್ಕಳು ಮೃತಪಟ್ಟು ಅವರ ಅಜ್ಜಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. 

Advertisement

ಆನೆಗಳು ಆಹಾರ ಅರಸಿಕೊಂಡು ಗುಡಿಸಲು ಇರುವ ಕಡೆಗೆ ಬಂದಿದ್ದವು; ಮನೆಯಲ್ಲಿ ಭತ್ತ ಸಂಗ್ರಹಿಸಿಡಲಾಗಿತ್ತು. ಅದನ್ನು ಎಳೆದು ತಿನ್ನುವ ಅವುಗಳ ದಾಳಿಯಲ್ಲಿ ಇಡಿಯ ಮನೆಯೇ ಧರಾಶಾಯಿಯಾಯಿತು. ನಸುಕಿನ 3 ಗಂಟೆಯ ವೇಳೆಗೆ ಈ ಘಟನೆ ನಡೆದಾಗ ಮನೆಯವರೆಲ್ಲ ನಿದ್ರಿಸಿಕೊಂಡಿದ್ದರು. 

ಗುಡಿಸಲಲ್ಲಿದ್ದ ಇಬ್ಬರು ಮಕ್ಕಳು ಸ್ಥಳದಲ್ಲೇ ಸತ್ತರು ಅವರ ಅಜ್ಜಿ ಗಂಭೀರವಾಗಿ ಗಾಯಗೊಂಡರು ಎಂದು ವಿಭಾಗೀಯ ಅರಣ್ಯಾಧಿಕಾರಿ ಸೌರಭ್‌ ಚಂದ್ರ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next