Advertisement

ಕಾಡಾನೆ ದಾಳಿಗೆ ತಮಿಳು ನಾಡಿನ ಶಬರಿಮಲೆ ಯಾತ್ರಿಕ ಬಲಿ

10:08 AM Jan 09, 2019 | udayavani editorial |

ಕೋಟ್ಟಯಂ, ಕೇರಳ : ಇಲ್ಲಿಂದ 60 ಕಿ.ಮೀ. ದೂರದ ಅರಣ್ಯದಲ್ಲಿ ಕಾಡಾನೆಯೊಂದು ಶಬರಿಮಲೆ ಯಾತ್ರಿಕನನ್ನು ತುಳಿದು ಕೊಂದಿರುವ ಘಟನೆ ನಡೆದಿದೆ.

Advertisement

ತಮಿಳು ನಾಡಿನ ಸೇಲಂ ನವರಾದ ಪರಮಶಿವಂ (35) ಅವರು ಕಾಡಾನೆ ತುಳಿತಕ್ಕೆ ಬಲಿಯಾದ ವ್ಯಕ್ತಿ. ಇವರು ತಮ್ಮ ಏಳು ವರ್ಷದ ಪುತ್ರ ಮತ್ತು ಇತರ 13 ಮಂದಿಯೊಂದಿಗೆ ಎರುಮಲೆ ಅರಣ್ಯ ಮಾರ್ಗವಾಗಿ ಪಂಬಾ ಗೆ ಹೋಗುತ್ತಿದ್ದಾಗ ಇಂದು ನಸುಕಿನ 1 ಗಂಟೆಯ ವೇಳೆಗೆ ಕಾಡಾನೆ ದಾಳಿಗೆ ಬಲಿಯಾದರು. 

ಪರಮಶಿವಂ ಅವರೊಂದಿಗೆ ಇದ್ದ ಇತರರು ಮತ್ತು ಆತನ ಪುತ್ರ ಅದೃಷ್ಟವಶಾತ್‌ ಪಾರಾದರು. ಪರಮಶಿವಂ ಅವರು ತಮ್ಮ ಪುತ್ರನನ್ನು ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next