Advertisement

Election; ದಿಲ್ಲಿ, ಹರಿಯಾಣ ಚುನಾವಣೆಯಲ್ಲಿ ಆಪ್‌ ಜತೆಗಿಲ್ಲ ಮೈತ್ರಿ: ಕಾಂಗ್ರೆಸ್‌

12:15 AM Jul 05, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸಿದ್ದ ಆಪ್‌ ಮತ್ತು ಕಾಂಗ್ರೆಸ್‌ ಹರಿಯಾಣ, ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲಿವೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಮಾಹಿತಿ ನೀಡಿದ್ದಾರೆ.

Advertisement

ಹರಿಯಾಣ ಮತ್ತು ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್‌ ಮತ್ತು ಕಾಂಗ್ರೆಸ್‌ ಮೈತ್ರಿಗೆ ಅಂಥ ಅವಕಾಶಗಳಿಲ್ಲ. ಆದರೆ ಝಾರ್ಖಂಡ್‌ ಮತ್ತು ಮಹಾರಾಷ್ಟ್ರದಲ್ಲಿ ಐಎನ್‌ಡಿಐಎ ಕೂಟವು ಸ್ಪರ್ಧಿಸಲಿದೆ ಎಂದು ಜೈರಾಂ ರಮೇಶ್‌ ಅವರು ಸುದ್ದಿ ಸಂಸೆœಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಪಂಜಾಬ್‌ ಮತ್ತು ಹರಿಯಾಣದಲ್ಲಿ ಐಎನ್‌ಡಿಐಎ “ಜನ್‌ಬಂಧನ್‌’ ಅಸ್ತಿತ್ವದಲ್ಲಿ ಇಲ್ಲ. ಹರಿಯಾಣದಲ್ಲಿ ನಾವು ಆಪ್‌ಗೆ ಒಂದು ಸ್ಥಾನ ನೀಡಿದ್ದೆವು. ಅದೇ ಮೈತ್ರಿ ವಿಧಾನಸಭೆಗೆ ಮುಂದುವರಿಯಲಿದೆ ಎಂದು ನಾನು ಭಾವಿಸುವುದಿಲ್ಲ. ದಿಲ್ಲಿಯಲ್ಲಿ ಆಪ್‌ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಹೇಳಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಹಾರಾಷ್ಟ್ರದಲ್ಲಿ ಎನ್‌ಸಿಪಿ(ಎಸ್‌ಪಿ) ಮತ್ತು ಶಿವಸೇನೆ(ಯುಬಿಟಿ) ಹಾಗೂ ಜಾರ್ಖಂಡ್‌ನ‌ಲ್ಲಿ ಜೆಎಂಎಂ ಜತೆಗಿನ ಮೈತ್ರಿಯು ವಿಧಾನಸಭೆ ಚುನಾವಣೆಗೂ ಮುಂದುವರಿಯಲಿದೆ. ಸ್ಥಳೀಯ ನಾಯಕರ ಇದಕ್ಕೆ ಸಮ್ಮತಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next