Advertisement

ಜ.5ರಂದು ಭಾರತದ ಚುನಾವಣಾ ಆಯೋಗದಿಂದ ಶಿವಸೇನಾ ಬಣಗಳ ವಿಚಾರಣೆ

09:45 PM Dec 12, 2022 | Team Udayavani |

ನವದೆಹಲಿ:ನಿಜವಾದ ಶಿವಸೇನೆ ಯಾರದ್ದು ಮತ್ತು ಪಕ್ಷದ ಚಿಹ್ನೆ ಯಾರಿಗೆ ಸೇರಬೇಕು ಎಂಬ ಬಗ್ಗೆ ಭಾರತದ ಚುನಾವಣಾ ಆಯೋಗ (ಇಸಿಐ) ಜ.5ರಂದು ವಿಚಾರಣೆ ನಡೆಸಲಿದೆ.

Advertisement

ಮಾಜಿ ಸಿಎಂ ಉದ್ಧವ್‌ ಠಾಕ್ರೆ ಬಣದ ನ್ಯಾಯವಾದಿ ಮತ್ತು ಮಹಾರಾಷ್ಟ್ರದ ಹಾಲಿ ಸಿಎಂ ಏಕನಾಥ ಶಿಂಧೆ ನೇತೃತ್ವದ ಬಣದ ನ್ಯಾಯವಾದಿಗಳು ಸೋಮವಾರ ಆಯೋಗದ ಕಚೇರಿಯಲ್ಲಿ ನಡೆದಿದ್ದ ವಿಚಾರಣೆ ವೇಳೆ ದಾಖಲೆಗಳನ್ನು ಸಲ್ಲಿಸಲು ಹೆಚ್ಚಿನ ಸಮಯಾವಕಾಶ ಕೋರಿದರು.

ಹಿರಿಯ ನ್ಯಾಯವಾದಿಗಳಾದ ಕಪಿಲ್‌ ಸಿಬಲ್‌ ಮತ್ತು ಮಹೇಶ್‌ ಜೇಠ್ಮಲಾನಿ ಅವರು ಉದ್ಧವ್‌ ಠಾಕ್ರೆ ಬಣದ ಪರ ವಾದ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next