Advertisement

ಕಾಡುಕುರಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಗ್ರಾ.ಪಂ ಚುನಾವಣಾ ಅಭ್ಯರ್ಥಿಗಳು

07:57 PM Dec 20, 2020 | Mithun PG |

ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಚುನಾವಣಾ ಪ್ರಚಾರಕ್ಕೆ ಹೋದವರು ಗೇಟಿಗೆ ಸಿಕ್ಕಿ ನರಳಾಡುತ್ತಿದ್ದ ಕಾಡುಕುರಿಯನ್ನು ರಕ್ಷಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ನೆಲ್ಲಿಕೆರೆ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ನೆಲ್ಲಿಕೆರೆ ಗ್ರಾಮದ ಕಿರಣ್ ಮೋನಿಸ್ ಹಾಗೂ ರತ್ನಾಕರ್ ಎಂಬುವರು ಪ್ರಚಾರಕ್ಕೆಂದು ತೆರಳುವಾಗ ಕಾಡುಕುರಿಯೊಂದು ಕೂಗುತ್ತಿರುವ ಶಬ್ಧ ಕೇಳಿಸಿತ್ತು. ಕೂಡಲೇ ಇಬ್ಬರು ಅಭ್ಯರ್ಥಿಗಳು ಪ್ರಚಾರವನ್ನು ಬಿಟ್ಟು ಕಾಡುಕುರಿಯನ್ನು ಹುಡುಕಿಕೊಂಡು ಹೋಗಿ ಅದನ್ನ ಗೇಟಿನಿಂದ ಬಿಡಿಸಿ ರಕ್ಷಿಸಿದ್ದಾರೆ.

ದೇಹದ ಅರ್ಧಭಾಗ ಗೇಟಿನ ಮಧ್ಯೆ ಸಿಲುಕಿ ಕಾಡುಕುರಿ ನರಳಾಡುತಿತ್ತು. ಸ್ಥಳಕ್ಕೆ ಬಂದ ಚುನಾವಣಾ ಅಭ್ಯರ್ಥಿಗಳು, ಪ್ರಾಣಾಪಾಯದಲ್ಲಿದ್ದ ಕುರಿಯನ್ನ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಈ ಕಾಡುಕುರಿ ಸಂತತಿ ಅವನತಿಯ ಅಂಚಿನಲ್ಲಿರೋ ಪ್ರಾಣಿ ಎಂದೇ ಗುರುತಿಸಲ್ಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next