Advertisement

ಹಿರಿಯರ ಬೇಡಿಕೆ ಈಡೇರಿಕೆ: ಸಚಿವ ಯು.ಟಿ. ಖಾದರ್‌

09:49 AM Jan 04, 2018 | Team Udayavani |

ಕುತ್ತಾರು: ಸರಕಾರದ ವಿಶೇಷ ನಿಧಿಯಿಂದ 20 ಲಕ್ಷ ರೂ. ಅನು ದಾನದಲ್ಲಿ ಉತ್ತಮ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಿದ್ದು, ಕಳೆದ ಚುನಾವಣೆ ಸಂದರ್ಭದಲ್ಲಿ ಇಲ್ಲಿನ ಹಿರಿಯರ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ತಿಳಿಸಿದರು. ಕುತ್ತಾರು ರಾಜರಾಜೇಶ್ವರೀ ಸಿದ್ಧಿ ವಿನಾಯಕ ಬಡಾವಣೆಯ ಕಾಂಕ್ರೀಟ್‌ ರಸ್ತೆ ಯನ್ನು ಉದ್ಘಾಟಿಸಿ ಮಾತನಾಡಿದರು. ಊರಿನ ಪ್ರಮುಖರು ರಸ್ತೆ ಅಭಿವೃದ್ಧಿ ಇದೀಗ ಬೇಡಿಕೆ ಈಡೇರಿ ದಂತಾಗಿದ್ದು, ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

Advertisement

ಉಳ್ಳಾಲ ನಗರ ಸಭೆ ಅಧ್ಯಕ್ಷ ಹುಸೈನ್‌ ಕುಂಞಿಮೋನು, ಸ್ಥಾಯೀ ಸಮಿತಿ ಅಧ್ಯಕ್ಷ ಉಸ್ಮಾನ್‌ ಕಲ್ಲಾಪು, ಉಳ್ಳಾಲ
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ, ಗುರು ಸ್ವಾಮಿ ಈಶ್ವರ್‌ ಬಡಾಜೆ, ಮಾಜಿ ತಾ.ಪಂ. ಸದಸ್ಯ ಮೊಹಮ್ಮದ್‌ ಮುಸ್ತಫ, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಸಂಘಟನಾ ಕಾರ್ಯಾದರ್ಶಿ ಇಕ್ಬಾಲ್‌ ಸಾಮಾನಿಗೆ, ಸಲೀಂ
ಮೆಗಾ, ಸೋಮೇಶ್ವರ ಪಂ.ಸದಸ್ಯ ಪುರುಷೋತ್ತಮ ಪಿಲಾರ್‌, ಶಾಂತ ಶರತ್‌, ಕ್ಲೀಟಸ್‌, ಚಿತ್ರ, ಚಂದ್ರಹಾಸ, ಮುಖೇಶ್‌, ಜಯ ರಾಮ್‌, ಅನಿಲ್‌, ರೋಶನ್‌, ಭವಾನಿ ಶಂಕರ್‌, ರೋನಿ ಪೆರ್ನಾಂಡೀಸ್‌, ರಮೇಶ್‌ ಶೆಟ್ಟಿಗಾರ್‌, ಗಣೇಶ್‌ ಕುತ್ತಾರ್‌, ರೋಹಿತ್‌, ಕೇಶವ, ರೋಬರ್ಟ್‌, ಸರಿತಾ, ಸವಿತಾ, ಪ್ರೇಮಾ, ಐರಿನ್‌ ಡಿ’ಸೋಜಾ, ಶಕೀಲಾ ಉಪಸ್ಥಿತರಿದ್ದರು.

ಸಮ್ಮಾನ
ಈ ಸಂದರ್ಭ ಆಹಾರ ಸಚಿವ ಯು.ಟಿ. ಖಾದರ್‌, ಉಳ್ಳಾಲ ನಗರ ಸಭೆ ಸದಸ್ಯೆ ಕುಮಾರಿ ಭಾರತಿ. ಎಂ, ಸಾಮಾಜಿಕ ಕಾರ್ಯಕರ್ತ ಸತೀಶ್‌ ಕುತ್ತಾರ್‌ ಅವರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next