Advertisement

ದೆಹಲಿಯಲ್ಲಿ ವೃದ್ಧ ದಂಪತಿ,ಮನೆ ಕೆಲಸದಾಕೆಯ ಬರ್ಬರ ಹತ್ಯೆ

10:02 AM Jun 24, 2019 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ದಿನ ನಿತ್ಯದಂತೆ ಸರಣಿ ಹತ್ಯಾಕಾಂಡಗಳು ನಡೆಯುತ್ತಿವೆ. ನೈಋತ್ಯ ದೆಹಲಿಯ ಪ್ರತಿಷ್ಠಿತ ವಸಂತ್‌ ಎನ್‌ಕ್ಲೇವ್‌ ಪ್ರದೇಶದಲ್ಲಿ ಭಾನುವಾರ ವೃದ್ಧ ದಂಪತಿಗಳು ಮತ್ತು ಮನೆ ಕೆಲಸದಾಕೆಯನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ.

Advertisement

ಹತ್ಯೆಗೀಡಾದವರು ದಂಪತಿಗಳಾದ ವಿಷ್ಣು, ಶಶಿ ಮಾಥುರ್‌ ಮತ್ತು ಕೆಲಸದಾಕೆ ಖುಷ್ಬು ಎನ್ನುವವರಾಗಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಂಪತಿಗೆ ತಿಳಿದರೆ ಹತ್ಯೆ ನಡೆಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಸುಲಭವಾಗಿ  ಮನೆ ಪ್ರವೇಶಿಸಿದ್ದು, ಬಲತ್ಕಾರದಿಂದ ಪ್ರವೇಶಿದಂತೆ ಕಂಡು ಬಂದಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮನೆಯೊಳಗಿನಿಂದ ಯಾವುದೇ ವಸ್ತುಗಳನ್ನುಲೂಟಿಗೈದಂತೆ ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಯಾವ ಕಾರಣಕ್ಕಾಗಿ ತ್ರಿವಳಿ ಕೊಲೆ ನಡೆದಿದೆ ಎನ್ನುವುದನ್ನು ತನಿಖೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next