Advertisement

ಮಲೆನಾಡಿಗೂ ತಬ್ಲಿಘಿ ನಂಟು: ಶಿವಮೊಗ್ಗದಲ್ಲಿ ಎಂಟು ಕೋವಿಡ್-19 ಸೋಂಕು ಪ್ರಕರಣ ಪತ್ತೆ

08:13 AM May 11, 2020 | keerthan |

ಶಿವಮೊಗ್ಗ: ಇದುವರೆಗೆ ಯಾವುದೇ ಕೋವಿಡ್-19 ಸೋಂಕು ಪ್ರಕರಣವಿಲ್ಲದೇ ಇದ್ದ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಇಂದು ಎಂಟು ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಈ ಎಲ್ಲಾ ಎಂಟು ಪ್ರಕರಣಗಳಿಗೆ ಕಾರಣ ತಬ್ಲಿಘಿ ನಂಟು ಎಂದು ವರದಿಯಾಗಿದೆ.

Advertisement

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದು, ಸೋಂಕು ಪತ್ತೆಯಾದ ಎಂಟು ಮಂದಿಗೂ ಕೋವಿಡ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.

ಅಹಮದಾಬಾದ್ ನಿಂದ ಬಂದವರಲ್ಲಿ ಕೋವಿಡ್ -19 ಸೋಂಕು ಕಾಣಿಸಿಕೊಂಡಿದ್ದು, ಇವರಲ್ಲಿ ಎಂಟು ಮಂದಿ ಶಿಕಾರಿಪುರದವರು, ಒಬ್ಬ ತೀರ್ಥಹಳ್ಳಿಯವರು ಎನ್ನಲಾಗಿದೆ.

ಶಿವಮೊಗ್ಗ ಜಿಲ್ಲೆ ಹಸಿರುವಲಯದಲ್ಲೇ ಮುಂದುವರಿಯುತ್ತದೆ. ಆದರೆ ಜನ ಜಾಗೃತರಾಗಿ ಇರಬೇಕು ಎಂದು ಸಚಿವ ಈಶ್ವರಪ್ಪ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next