Advertisement

ನಟ ಕಮಲಹಾಸನ್‌ ಗುರಿಯಾಗಿರಿಸಿಕೊಂಡು ಮೊಟ್ಟೆ,ಕಲ್ಲು ತೂರಾಟ

09:38 AM May 18, 2019 | Vishnu Das |

ಚೆನ್ನೈ: ಖ್ಯಾತ ನಟ, ಮಕ್ಕಳ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲಹಾಸನ್‌ ಅವರನ್ನು ಗುರಿಯಾಗಿರಿಸಿಕೊಂಡು ಕಲ್ಲು ಮತ್ತು ಮೊಟ್ಟೆಗಳನ್ನು ತೂರಲಾಗಿದೆ.

Advertisement

ಗುರುವಾರ ರಾತ್ರಿ ಅರವಾಕುರಿಚಿಯಲ್ಲಿ ಉಪಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದವೇಳೆ ಇಬ್ಬರು ದುಷ್ಕರ್ಮಿಗಳು ಕಲ್ಲು ಮತ್ತು ಮೊಟ್ಟೆಗಳನ್ನು ತೂರಿದ್ದಾರೆ.

ಕಲ್ಲು ಮತ್ತು ಮೊಟ್ಟೆಗಳು ಯಾರೊಬ್ಬರಿಗೂ ತಗುಲಿಲ್ಲ. ಕಮಲಹಾಸನ್‌ ಅವರಿಗೆ ಭದ್ರತಾ ಸಿಬಂದಿ ರಕ್ಷಣೆ ನೀಡಿದರು.

ಘಟನೆ ಬಳಿಕ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ತಕ್ಷಣ ಬಂಧಿಸುವುದಾಗಿ ತಿಳಿಸಿದ್ದಾರೆ.

Advertisement

ಬುಧವಾರಸಂಜೆಯೂ ಕಮಲಹಾಸನ್‌ ಅವರನ್ನಗುರಿಯಾಗಿರಿಸಿಕೊಂಡು ಚಪ್ಪಲಿಯನ್ನು ತೂರಲಾಗಿತ್ತು.

ಅಭಿಮಾನಿಗಳು ಯಾರು ಉದ್ರಿಕ್ತರಾಗಿ ಶಾಂತಿ ಕದಡಬಾರದು ಎಂದು ಕಮಲಹಾಸನ್‌ ಮನವಿ ಮಾಡಿದ್ದಾರೆ.

ಕಮಲಹಾಸನ್‌ ಅವರು ನಾಥುರಾಮ್‌ ಗೋಡ್ಸೆ ಮೊದಲ ಹಿಂದು ಉಗ್ರ ಎಂಬ ಹೇಳಿಕೆ ನೀಡಿದ್ದರು. ಆ ಬಳಿಕ ಆಕ್ರೋಶ ವ್ಯಕ್ತವಾಗಿತ್ತು.

ಬಂಧನವಾದರೂ ಭಯ ಪಡುವುದಿಲ್ಲ!
ತಮ್ಮ ಮೇಲಾದ ದಾಳಿಯ ಕುರಿತು ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಡಿದ ಕಮಲಹಾಸನ್‌ , ನಾನು ನನ್ನ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ. ಉಗ್ರರಿಗೆ ಯಾವುದೇ ಧರ್ಮವಿಲ್ಲ. ಪ್ರತೀ ಧರ್ಮದಲ್ಲೂ ಅದರದೇ ಉಗ್ರತ್ವ ಹೊಂದಿರುವುದನ್ನು ಇತಿಹಾಸ ತೋರಿಸಿಕೊಡುತ್ತದೆ. ಯಾರೂ ಅವರನ್ನು ಪವಿತ್ರ ಎನ್ನುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next