Advertisement

ಯುಪಿ ಎಫೆಕ್ಟ್ ರಾಜ್ಯದಲ್ಲಿ ಆಗಲ್ಲ

12:24 PM Mar 14, 2017 | |

ಬೆಂಗಳೂರು: ಉತ್ತರ ಪ್ರದೇಶ ಚುನಾವಣೆ ಫ‌ಲಿತಾಂಶ ರಾಜ್ಯದ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರ ಭಾರತದ ರಾಜಕಾರಣಕ್ಕೂ ದಕ್ಷಿಣ ಭಾರತದ ರಾಜಕಾರಣಕ್ಕೂ ತುಂಬಾ ವ್ಯತ್ಯಾಸವಿದೆ.

Advertisement

ಉತ್ತರ ಭಾರತದಲ್ಲಿ ಜನರು ಬಿಜೆಪಿ ಆಡಳಿತ ನೋಡಿರಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಆಡಳಿತ ನೋಡಿದ್ದಾರೆ. ಗೋವಾದಲ್ಲಿ ಕಾಂಗ್ರೆಸ್‌ ಅತಿ ಸ್ಥಾನ ಪಡೆದಿದ್ದರೂ, ರಾಜ್ಯಪಾಲರು ಎರಡನೇ ಸ್ಥಾನ ಪಡೆದ ಬಿಜೆಪಿಗೆ ಆಹ್ವಾನ ನೀಡಿ, ಬಹುಮತ ಸಾಬೀತಿಗೆ 15 ದಿನ ಅವಕಾಶ ನೀಡುವ ಮೂಲಕ ಅವರೇ ಕುದುರೆ ವ್ಯಾಪಾರಕ್ಕೆ ಆಹ್ವಾನ ನೀಡಿದ್ದಾರೆ ಎಂದು ದೂರಿದರು.

ಗೋವಾ ರಾಜ್ಯಪಾಲರು ಅಧಿಕಾರ ದುರು ಪಯೋಗ ಪಡೆಸಿಕೊಂಡು, ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next