Advertisement
ವಾದ್ರಾಗೆ ಸಂಬಂಧಿಸಿದ ದಿಲ್ಲಿಯಲ್ಲಿನ ಸುಖದೇವ್ ವಿಹಾರ್ ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯ ಬೆಳಗ್ಗೆ 11ರ ವೇಳೆಗೆ ದಾಳಿ ನಡೆಸಿದೆ. ಹೊಸದಾಗಿ ಸಿಕ್ಕ ಸಾಕ್ಷ್ಯಗಳ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದೂ ಇ.ಡಿ. ತಿಳಿಸಿದೆ. ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣದ ಆರೋಪಿ ಕ್ರಿಶ್ಚಿಯನ್ ಮೈಕಲ್ ಗಡೀಪಾರಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಮತದಾನೋತ್ತರ ಸಮೀಕ್ಷೆ ಫಲಿತಾಂಶವನ್ನು ಮರೆ ಮಾಚಲು ಬಿಜೆಪಿ ಈ ತಂತ್ರವನ್ನು ಹೆಣೆದಿದೆ. ಇಂತಹ ಮೂರ್ಖ ಕ್ರಮವು ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರನ್ನು ಹಿಮ್ಮೆಟ್ಟಿಸಲಾಗದು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇìವಾಲಾ ಹೇಳಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದಲೂ ಈ ತಂತ್ರ ನಡೆಯುತ್ತಿದೆ. ಈವರೆಗೆ ಯಾವ ಸಾಕ್ಷ್ಯವೂ ಸಿಕ್ಕಿಲ್ಲ. ಹೀಗಾಗಿ ನಮ್ಮನ್ನು ಕಚೇರಿಯ ಒಳಗೆ ಕೂಡಿ ಹಾಕಿ ಸಾಕ್ಷ್ಯ ಸೃಷ್ಟಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ ಎಂದು ವಾದ್ರಾ ಪರ ವಕೀಲರು ಆಕ್ಷೇಪಿಸಿದ್ದಾರೆ.