Advertisement

ಪತ್ನಿಗೆ ಟಿಎಂಸಿಯಿಂದ ಟಿಕೆಟ್ : ಚುನಾವಣಾ ಕಾರ್ಯಗಳಿಂದ ಪೊಲೀಸ್ ಅಧಿಕಾರಿಗೆ ಗೇಟ್ ಪಾಸ್

03:49 PM Mar 09, 2021 | Team Udayavani |

ಕೊಲ್ಕತ್ತಾ : ಪತ್ನಿಯು ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ ಕಾರಣ ಎಸ್ ಪಿ(ಪೊಲೀಸ್ ವರಿಷ್ಠಾಧಿಕಾರಿ) ಯನ್ನು ಚುನಾವಣಾ ಕಾರ್ಯಗಳಿಂದ ದೂರ ಉಳಿಯುವಂತೆ ಭಾರತೀಯ ಚುನಾವಣಾ ಆಯೋಗ ಆದೇಶ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

Advertisement

ಪಶ್ಚಿಮ ಬಂಗಾಳದ ಹೌರಾದಲ್ಲಿ ಎಸ್ ಪಿಯಾಗಿರುವ ಸೌಮ್ಯ ರಾಯ್ ಪತ್ನಿ ಹಾಗೂ ನಟಿ ಲೌವ್ಲಿ ಮೈತ್ರಾ ಟಿಎಂಸಿ ಪಕ್ಷದಿಂದ ಸ್ಪರ್ಧೆ ನಡೆಸಿದ್ದಾರೆ. 24 ಪರಗಳ ಜಿಲ್ಲೆಯ ಸೋನಾಪುರ ದಕ್ಷಿಣ ಕ್ಷೇತ್ರದಲ್ಲಿ ಮೈತ್ರಾ ಸ್ಪರ್ಧಿಸಿದ್ದಾರೆ.

ಚುನಾವಣಾ ಆಯೋಗದ ಪ್ರಕಾರ ಚುನಾವಣೆಗೆ ಸ್ಪರ್ಧೆ ನಡೆಸಿದ ಅಭ್ಯರ್ಥಿಗಳ ಮನೆಯವರು ಸರ್ಕಾರದ ಕಡೆಯಿಂದ ಚುನಾವಣಾ ಕಾರ್ಯದಲ್ಲಿ ಭಾಗಿಯಾಗುವಂತಿಲ್ಲ. ಈ ಹಿನ್ನೆಲೆಯಲ್ಲಿ ಆಯೋಗವು ಸೌಮ್ಯ ರಾಯ್ ರನ್ನು ಚುನಾವಣಾ ಕೆಲಸದಿಂದ ದೂರ ಇರಿಸಿದೆ.

ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27 ರಿಂದ ಏಪ್ರಿಲ್ 28ರವರೆಗೆ 8 ಹಂತದ ಚುನಾವಣೆ ನಡೆಯಲಿದೆ. ಒಟ್ಟು 294 ಕ್ಷೇತ್ರಗಳಿಗೆ ಚುನಾವನೆ ನಡೆಯುತ್ತಿದ್ದು, ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next