Advertisement

Controversy; ನಿತ್ಯ ಮೀನು ತಿಂದರೆ ಕಣ್ಣುಗಳು ಐಶ್ವರ್ಯಾ ರೈ ಹಾಗೆ!: ಮಹಾ ಸಚಿವ

05:06 PM Aug 21, 2023 | Team Udayavani |

ಮುಂಬೈ: ನಟಿ ಐಶ್ವರ್ಯಾ ರೈ ಅವರಂತೆ ಕಣ್ಣುಗಳನ್ನು ಹೊಂದಲು ನಿತ್ಯ ಮೀನಿನ ಸೇವನೆ ಮಾಡಬೇಕು ಎಂದು
ಮಹಾರಾಷ್ಟ್ರದ ಬಿಜೆಪಿ ಸಚಿವರೊಬ್ಬರು ಹೇಳಿಕೆಯ ನೀಡಿ ವಿವಾದಕ್ಕೆ ಸಿಲುಕಿದ್ದಾರೆ.

Advertisement

ಉತ್ತರ ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯ ಸಾರ್ವಜನಿಕ ಸಮಾರಂಭವೊಂದರಲ್ಲಿ ರಾಜ್ಯ ಬುಡಕಟ್ಟು ಸಚಿವ ವಿಜಯ್‌ಕುಮಾರ್ ಗಾವಿತ್ ಅವರು ನೀಡಿದ ಹೇಳಿಕೆಗಳ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

“ಪ್ರತಿನಿತ್ಯ ಮೀನುಗಳನ್ನು ತಿನ್ನುವ ಜನರು ನಯವಾದ ಚರ್ಮವನ್ನು ಹೊಂದಿರುತ್ತಾರೆ, ಅವರ ಕಣ್ಣುಗಳು ಹೊಳೆಯುತ್ತವೆ. ಮೀನಿನಲ್ಲಿ ಕೆಲವು ಎಣ್ಣೆಗಳಿವೆ, ಅದು ನಿಮ್ಮ ಚರ್ಮವನ್ನು ಮೃದುಗೊಳಿಸುತ್ತದೆ. ಯಾರಾದರೂ ನಿಮ್ಮನ್ನು ನೋಡಿದರೆ ಅವರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ನಾನು ಐಶ್ವರ್ಯ ರೈ ಬಗ್ಗೆ ಹೇಳಿದ್ದೇನಾ? ಮಂಗಳೂರಿನ ಸಮುದ್ರ ತೀರದ ಬಳಿ ವಾಸವಿದ್ದ ಆಕೆ ಪ್ರತಿದಿನ ಮೀನು ಸೇವಿಸುತ್ತಿದ್ದರು. ನೀವು ಅವರ ಕಣ್ಣುಗಳನ್ನು ನೋಡಿದ್ದೀರಾ? ನಿಮಗೂ ಅವರಂತೆ ಕಣ್ಣುಗಳಿರುತ್ತವೆ” ಎಂದು ಸಚಿವರು ಹೇಳುತ್ತಿರುವುದು ವಿಡಿಯೋ ದಲ್ಲಿ ಕಂಡು ಬಂದಿದೆ.

ಎನ್‌ಸಿಪಿ ಶಾಸಕ ಅಮೋಲ್ ಮಿಟ್ಕರಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸಚಿವರು ಇಂತಹ ಅನಗತ್ಯ ಕಾಮೆಂಟ್‌ಗಳನ್ನು ಮಾಡುವ ಬದಲು ಬುಡಕಟ್ಟು ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು ಎಂದಿದ್ದಾರೆ.

ಬಿಜೆಪಿ ಶಾಸಕ ನಿತೇಶ್ ರಾಣೆ, “ನಾನು ಪ್ರತಿದಿನ ಮೀನು ತಿನ್ನುತ್ತೇನೆ. ನನ್ನ ಕಣ್ಣುಗಳು ಐಶ್ವರ್ಯಾ ರೈ ಅವರಂತೆ ಆಗಬೇಕಿತ್ತು ಇದರ ಬಗ್ಗೆ ಏನಾದರೂ ಸಂಶೋಧನೆ ಇದ್ದರೆ ನಾನು ಗಾವಿತ್ ಸಾಹಿಬ್ ಅವರನ್ನು ಕೇಳುತ್ತೇನೆ ಎಂದಿದ್ದಾರೆ.

Advertisement

ವಿಜಯ್‌ಕುಮಾರ್ ಗಾವಿತ್ ಪುತ್ರಿ ಹೀನಾ ಗಾವಿತ್ ಬಿಜೆಪಿಯ ಲೋಕಸಭಾ ಸದಸ್ಯರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next