Advertisement

ಮಿಜೋರಾಂನಲ್ಲಿ ಕಂಪಿಸಿದ ಭೂಮಿ

01:52 AM Jun 23, 2020 | Hari Prasad |

ಐಜ್ವಾಲ್‌/ಹೊಸದಿಲ್ಲಿ: ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಸೋಮವಾರ ಬೆಳಗ್ಗಿನ ಜಾವ ಭೂಕಂಪ ಸಂಭವಿಸಿದೆ.

Advertisement

ರಿಕ್ಟರ್‌ಮಾಪಕದಲ್ಲಿ ಅದರ ಪ್ರಮಾಣ 5.3ರಷ್ಟು ದಾಖಲಾಗಿದೆ.

ಜೀವ ಹಾನಿ ಉಂಟಾಗದೇ ಇದ್ದರೂ, ರಸ್ತೆ, ಮನೆಗಳು ಬಿರುಕುಬಿಟ್ಟಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಮುಖ್ಯ ಮಂತ್ರಿ ಝೊರಾ ಮ್‌ತಾಂಗಾ ಜತೆ ಮಾತುಕತೆ ನಡೆಸಿ, ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ 4.10ರ ಸುಮಾರಿಗೆ ಭೂಕಂಪ ಉಂಟಾಗಿದೆ. ಭಾರತ ಮತ್ತು ಮ್ಯಾನ್ಮಾರ್‌ ಗಡಿಭಾಗದ ಜಿಲ್ಲೆ ಛಂಪೈನ ಝೊಖಾವ್ತಾರ್‌ನಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಭೂಕಂಪಶಾಸ್ತ್ರ ಮಾಪನ ಸಂಸ್ಥೆ ತಿಳಿಸಿದೆ.

Advertisement

ರಾಜಧಾನಿ ಐಜ್ವಾಲ್‌, ಛಂಪೈ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಇದರಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ಮನೆಗಳು, ರಸ್ತೆಗಳು ಬಿರುಕು ಬಿಟ್ಟಿವೆ ಎಂದು ರಾಜ್ಯ ಸರಕಾರ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಮುಖ್ಯಮಂತ್ರಿ ಝೊರಾಮ್‌ತಾಂಗ ಜತೆಗೆ ಮಾತುಕತೆ ನಡೆಸಿ ಕೇಂದ್ರ ಸರಕಾರದಿಂದ ಅಗತ್ಯವಿರುವ ನೆರವು ನೀಡುವ ವಾಗ್ಧಾನ ಮಾಡಿದ್ದಾರೆ. ನಾಗಾಲ್ಯಾಂಡ್‌ನ‌ಲ್ಲಿಯೂ ರಿಕ್ಟರ್‌ಮಾಪಕದಲ್ಲಿ 2.8ರಷ್ಟು ದಾಖಲಾ ಗಿರುವ ಅಲ್ಪ ಪ್ರಮಾಣ ಭೂಕಂಪ ಸಂಭವಿಸಿದೆ.

ಅದರ ಕೇಂದ್ರ ಸ್ಥಾನ ಕೊಹಿಮಾದಿಂದ 44 ಕಿಮೀ ದೂರದಲ್ಲಿ ದಾಖಲಾಗಿದೆ. ರವಿವಾರ ಮೇಘಾಲಯ ಮತ್ತು ಮಣಿಪುರಗಳಲ್ಲಿ ರಿಕ್ಟರ್‌ ಮಾಪಕದಲ್ಲಿ 5.1ರಷ್ಟು ದಾಖಲಾಗಿರುವ ಭೂಕಂಪ ಸಂಭವಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next