Advertisement

ತಿಕೋಟಾ ತಾಲೂಕಿನಲ್ಲಿ ಮತ್ತೆ ಭೂಕಂಪ : ಭಯದಿಂದ‌ ಮನೆಯಿಂದ ಹೊರ ಓಡಿದ ಜನ

08:18 PM Oct 18, 2021 | sudhir |

ವಿಜಯಪುರ : ಜಿಲ್ಲೆಯಲ್ಲಿ ಭೂಕಂಪನ ಮುಂದುವರೆದಿದ್ದು, ಸೋಮವಾರ ಸಂಜೆ ತಿಕೋಟಾ ತಾಲೂಕಿನ ಹಲವೆಡೆ ಭೂಕಂಪನ ಸಂಭವಿದೆ. ಭೂಮಿ ಕಂಪಿಸುತ್ತಲೇ ಜನರು ಮನೆಗಳಿಂದ ಹೊರಗೋಡಿ ಬಂದಿದ್ದಾರೆ.

Advertisement

ಸೋಮವಾರ ಸಂಜೆ 6.34 ಗಂಟೆಗೆ ತಾಲೂಕಿನ ಕಳ್ಳಕವಟಗಿ, ಘೋಣಸಗಿ, ಬಾಬಾನಗರ, ಬಿಜ್ಜರಗಿ, ಹುಬನೂರ, ಸಿದ್ದಾಪುರ ಕೆ. ಟಕ್ಕಳಕಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ ಗ್ರಾಮಗಳಲ್ಲಿ ಭೂಕಂಪನ ಆಗಿದೆ.

ಈ ಸಮಯದಲ್ಲಿ ಭೂಮಿಯ ಆಳದಿಂದ ಜೋರಾದ ಶಬ್ದ ಕೇಳಿಬಂದಿದ್ದು, 5-10 ಸೆಕೆಂಡ್ ಕಂಪಿಸಿ ಭೂಮಿಯಲ್ಲಿ ಜೋರಾದ ಶಬ್ದ ಉಂಟಾಗಿ ಮನೆ ಮೇಲ್ಚಾವಣಿ ಮಣ್ಣು ಉದುರಿದೆ. ಮನೆಯಲ್ಲಿನ ಹಿರಿಯರು ಮಕ್ಕಳೊಂದಿಗೆ ಮನೆಯಿಂದ ಭಯಗೊಂಡು ಹೊರ ಓಡಿ ಬಂದಿದ್ದಾರೆ.

ಗ್ರಾಮಸ್ಥರಾದ ಕುಮಾರ ಗಳತಗಿ, ಅಣ್ಣಾರಾಯ ಪ್ರಕಾರ ಪದೇಪದೇ ಭೂಕಂಪನ ಸಂಭವಿಸುತ್ತಿದ್ದು, ಜನರು ಭಯದಲ್ಲೇ ಬದುಕುವಂತೆ ಮಾಡಿದೆ. ಇದೇ ತಿಂಗಳು ಕೆಲವು ದಿನಗಳ ಹಿಂದೆ ಸಂಭವಿಸಿದ್ದ ಭೂಕಂಪನ ರಿಕ್ಟರ್ ಮಾಪಕದಲ್ಲೂ ದಾಖಲಾಗಿತ್ತು. ಬಿಜ್ಜರಗಿ ಗ್ರಾಮವು ಭೂಕಂಪನದ ಕೇಂದ್ರವಾಗಿತ್ತು. ಆ ಸಮಯದಲ್ಲಿ ಯಾವ ಅಧಿಕಾರಿಯಾಗಲಿ, ಗಣಿ ಹಾಗೂ ಭೂ ವಿಜ್ಞಾನಿಗಳಾಗಲಿ ಈ ಗ್ರಾಮಗಳಿಗೆ ಭೇಟಿ ನೀಡಿಲ್ಲ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ಈ ಭಾಗದಲ್ಲಿ ಭಾರಿ ಶಬ್ದದೊಂದಿಗೆ ವಾರದಲ್ಲಿ 3-4 ಬಾರಿ ಭೂಕಂಪನ ಆಗುತ್ತಿತ್ತು, ಆದರೆ ಅದು ರಿಕ್ಟರ್ ಮಾಪಕದಲ್ಲಿ ದಾಖಲಾಗಿರಲಿಲ್ಲ. ಆಗ ಗಣಿ ಹಾಗೂ ಭೂ ವಿಜ್ಞಾನಿಗಳು ಈ ಗ್ರಾಮಗಳಿಗೆ ಭೇಟಿ ನೀಡಿ ಭೂಕಂಪನಲ್ಲ, ಇದೊಂದು ಭೂಮಿಯಲ್ಲಿ ನಡೆಯುವ ನೈಸರ್ಗಿಕ ಪ್ರಕ್ರಿಯೆ ಎಂದಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.

Advertisement

ಇದನ್ನೂ ಓದಿ :ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

Advertisement

Udayavani is now on Telegram. Click here to join our channel and stay updated with the latest news.

Next