Advertisement

ಜನನ-ಮರಣ ನೋಂದಣಿಗೆ ಇ-ಜನ್ಮ ತಂತ್ರಾಂಶ ಉಪಯುಕ್ತ

05:50 PM Jan 30, 2021 | Team Udayavani |

ಯಾದಗಿರಿ: ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಇ-ಜನ್ಮ ತಂತ್ರಾಂಶ ಅತ್ಯಂತ ಉಪಯುಕ್ತವಾಗಿದ್ದು,
ತರಬೇತಿ ಸದುಪಯೋಗ ಪಡೆದುಕೊಳ್ಳುವಂತೆ ಡಿಸಿ ಡಾ| ರಾಗಪ್ರಿಯ. ಆರ್‌ ಹೇಳಿದರು.

Advertisement

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶುಕ್ರವಾರ ಹಮ್ಮಿಕೊಂಡ ಜನನ-ಮರಣ ನೋಂದಣಿ ನಿಯಮಗಳು ಮತ್ತು ಇ-ಜನ್ಮ ತಂತ್ರಾಂಶ ನಿರ್ವಹಣೆ ಕುರಿತು ಪುನಃಶ್ಚೇತನ ತರಬೇತಿ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಜಾರಿಯಲ್ಲಿದ್ದ ನೋಂದಣಿ ಪ್ರಕ್ರಿಯೆಗಿಂತಲೂ ಇ-ಜನ್ಮ ತಂತ್ರಾಂಶದ ಮೂಲಕ ನಿರ್ವಹಿಸಲಾಗುವ ಜನನ-ಮರಣ ನೋಂದಣಿ ಪ್ರಕ್ರಿಯೆ ಸರಳವಾಗಿದೆ.

ಕಾರಣ ಜನನ-ಮರಣ ನೋಂದಣಿ ಪತ್ರಗಳಿಗಾಗಿ ಬರುವ ನಾಗರಿಕರಿಗೆ ಕೂಡಲೇ ದಾಖಲಾತಿ ನೀಡಬಹುದಾಗಿದೆ ಎಂದರು. ನೋಂದಣಿಗಾಗಿ ಗ್ರಾಮಲೆಕ್ಕಿಗರಲ್ಲಿ ಬರುವ ಸಾರ್ವಜನಿಕರಲ್ಲಿ ಇ-ಜನ್ಮ ತಂತ್ರಾಂಶದ ಮೂಲಕ ನೀಡುವ ಪತ್ರಗಳ ಕುರಿತು ಜಾಗೃತಿ ಮೂಡಿಸಬೇಕು.

ಕಂದಾಯ, ಆರೋಗ್ಯ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ವಿಳಂಬಕ್ಕೆ ಆಸ್ಪದವಿದಲ್ಲದಂತೆ ಈ ಪ್ರಮಾಣ ಪತ್ರಗಳನ್ನು ನೀಡುವ ಸೂಕ್ತ ತಾಂತ್ರಿಕ ಸಮಸ್ಯೆ, ನ್ಯೂನ್ಯತೆಗಳ ಬಗ್ಗೆ ತಿಳಿದುಕೊಂಡು ಇ-ಜನ್ಮ ಅನುಷ್ಠಾನದಲ್ಲಿ ಯಾವುದೇ ಕೊರತೆಯಾಗದಂತೆ ಎಚ್ಚರವಹಿಸುವಂತೆ ಕಿವಿಮಾತು ಹೇಳಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ. ರಜಪೂತ್‌, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ್‌, ಇ-ಜನ್ಮ
ಸಾಫ್ಟ್‌ವೇರ್‌ನ ಪ್ರಾಜೆಕ್ಟ್ ಮ್ಯಾನೇಜರ್‌ ಮಧುಕರ್‌ ಮಾತನಾಡಿದರು. ಜಿಲ್ಲಾ ಸಾಂಖೀಕ ಅ ಧಿಕಾರಿ ಹಾಗೂ ಅಪರ ಜಿಲ್ಲಾ ಜನನ-ಮರಣ ನೋಂದಣಾ ಧಿಕಾರಿ ಗೋಪಾಲ್‌ ವಂಟಿ, ಗ್ರಾಮಲೆಕ್ಕಿಗರು, ಆರೋಗ್ಯ ಇಲಾಖೆ, ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ತರಬೇತಿಯಲ್ಲಿ ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next