Advertisement

ಸುಭದ್ರ ಆಡಳಿತ ಬೆಂಬಲಿಸಲು ಡಿವಿಎಸ್‌ ಕರೆ

11:15 AM Apr 06, 2019 | Team Udayavani |

ಬೆಂಗಳೂರು: ದೇಶಕ್ಕೆ ಸುಭದ್ರ ಮತ್ತು ಸುಸ್ಥಿರ ಆಡಳಿತ ಅತ್ಯಗತ್ಯವಾಗಿದ್ದು, ಪ್ರಜ್ಞಾವಂತ
ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಮನವಿ ಮಾಡಿದರು.

Advertisement

ಶುಕ್ರವಾರ ಬೆಳಗ್ಗೆ ಯಶವಂತಪುರ ವಿಧಾನಸಭೆ ಕ್ಷೇತ್ರದ ತಾವರೆಕೆರೆ ಹೋಬಳಿ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸಿದ ನಂತರ ಅವರು
ಸುದ್ದಿಗಾರರೊಂದಿಗೆ ಮಾತನಾಡಿದರು.

ಜಗತ್ತಿಗೆ ಸಂದೇಶ ರವಾನೆ: ಪುಲ್ವಾಮ ದಾಳಿ ನಂತರ ಪಾಕಿಸ್ತಾನದ ನೆಲಕ್ಕೇ ನುಗ್ಗಿ ನಮ್ಮ ಸೈನಿಕರು ಉಗ್ರರನ್ನು ಸದೆಬಡಿದಿದ್ದಾರೆ. ದೇಶದ ರಕ್ಷಣೆ ವಿಷಯದಲ್ಲಿ ರಾಜೀಯಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ
ಮೂಲಕ ನರೇಂದ್ರ ಮೋದಿಯವರು ಜಗತ್ತಿಗೆ ಸಾರಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರಕೇಂ ದ್ರದಲ್ಲಿ ಆಡಳಿತದಲ್ಲಿದ್ದಾಗ ಸೇನೆಗೆ ಅಗತ್ಯ ಸ್ವಾತಂತ್ರÂ ನೀಡಿರಲಿಲ್ಲ. ಉಗ್ರರ ಬಗ್ಗೆ ಮೃದು ಧೋರಣೆ ಅನುಸರಿಸಲಾಗಿತ್ತು. ಆದ್ದರಿಂದಲೇ ಪಾಕಿಸ್ತಾನ ಚಿಗಿತುಕೊಂಡಿತ್ತು ಎಂದು ಹೇಳಿದರು.

ಉತ್ತಮ ಪ್ರತಿಕ್ರಿಯೆ: ಸದಾನಂದಗೌಡರು ಹಲವು ಮುಖಂಡರ ಮನೆಗಳಿಗೆ ತೆರಳಿ ಮತ ಯಾಚಿಸಿದಾಗ ಉತ್ತಮ ಪ್ರತಿಕ್ರಿಯೆ ಕಂಡುಬಂತು. ದೇಶದ ಭದ್ರತೆ ವಿಷಯದಲ್ಲಿ ಮೋದಿಯವರು ಕೈಗೊಂಡ ಕಠಿಮ ಕ್ರಮಗಳನ್ನು ಶ್ಲಾ ಸಿದ ಮುಖಂಡರು ಈ ಬಾರಿ ಬಿಜೆಪಿ ಬೆಂಬಲಿಸುವುದಾಗಿ ಭರವಸೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ಯಶವಂತಪುರ ವಿಧಾನ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಮಾರೇಗೌಡ, ಮುಖಂಡರಾದ
ಆಂಜಿನಪ್ಪ, ಚಂದ್ರಮ್ಮ ಮುನಿಯಪ್ಪ, ಗೋಪಾಲ,ಮುನಿಯಪ್ಪ, ವೀರೇಶ್‌, ರಮೇಶ್‌, ನಾಗರಾಜ,ಬಸವರಾಜ್‌ ಮತ್ತಿತರರು ಹಾಜರಿದ್ದರು.

Advertisement

ಮುಖಂಡರ ಮನೆಗಳಿಗೆ ಭೇಟಿ: ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ  ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರು ತಾವರೇಕೆರೆ
ಹೋಬಳಿಯ ಮುಖಂಡರ ಮನೆಗಳಿಗೆ ಭೇಟಿ ನೀಡಿ, ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದರು.

ಚನ್ನೇನಹಳ್ಳಿಯಲ್ಲಿರುವ ಜಿ.ಪಂ ಸದಸ್ಯ ನರಸಿಂಹಮೂರ್ತಿ ನಿವಾಸ, ಯಲಚಗುಪ್ಪದ ರಂಗಸ್ವಾಮಿ, ಜೈಪ್ರಕಾಶ್‌, ರಮೇಶ್‌, ಹೆನ್ನಗನಹಟ್ಟಿಯ ವರಲಕ್ಷ್ಮೀ ವೀರೇಶ್‌, ಮೇಟಿಪಾಳ್ಯದ ಗ್ರಾ.ಪಂ ಸದಸ್ಯ ಬಸವರಾಜು ಅವರ ಮನೆಗಳಿಗೆ ತೆರಳಿ ಮಾತುಕತೆ ನಡೆಸಿದರು.

ನಂತರ ವರ್ತೂರು ಗ್ರಾಮ ದೇವತೆ ಮಾರಮ್ಮದೇವಿ ದೇವಸ್ಥಾನಕ್ಕೆ ತೆರಳಿದ ಸದಾನಂದಗೌಡರು ಪೂಜೆ ಸಲ್ಲಿಸಿದರು. ಮುಖಂಡ ನಾಗರಾಜ್‌ ಮನಗೆ ತೆರಳಿ ಬೆಂಬಲ ಯಾಚಿಸಿದರು. ಪೆದ್ದನಪಾಳ್ಯ ಮೂಲಕ ಗಾಣಕಲ್ಗೆ ತೆರಳಿ ಮುಖಂಡ ರಮೇಶ್‌ ನಿವಾಸ, ಕನಕನಗರದ ಲಕ್ಕಪ್ಪ, ಮನೆಗೆ
ತೆರಳಿ ಮತ ಯಾಚಿಸಿದರು. ಬಳಿಕ ತಾವರೇಕೆರೆ ಮಾರಮ್ಮದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next