Advertisement

ಇಫ್ತಾರ್‌ ಮಾಡಿದ್ದು ತಪ್ಪಲ್ಲ,ಆದರೆ ಮಠದಲ್ಲಿ ನಮಾಜ್‌ ನಡೆಯಬಾರದಿತ್ತು

12:30 PM Jun 27, 2017 | |

ಮೈಸೂರು : ಶ್ರೀಕೃಷ್ಣ ಮಠದಲ್ಲಿ ಇಫ್ತಾರ್‌ ಕೂಟ ಆಯೋಜಿಸಿದ್ದರ ಬಗ್ಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಪ್ರತಿಕ್ರಿಯೆ ನೀಡಿದ್ದು , ಶ್ರೀಗಳು ಭಾವನಾತ್ಮವಾಗಿ ಕೂಟ ಆಯೋಜಿಸಿದ್ದಾರೆ ಇದರಲ್ಲಿ  ತಪ್ಪಿಲ್ಲ ಎಂದಿದ್ದಾರೆ.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿವಿಎಸ್‌ ಎಲ್ಲಾ ವರ್ಗದವರಲ್ಲಿ ಸಮಾನತೆಯನ್ನು ಶ್ರೀಗಳು ಹೊಂದಿದ್ದಾರೆ, ಹೀಗಾಗಿ ಇಫ್ತಾರ್‌ ಆಯೋಜಿಸಲಾಗಿದೆ. ಆದರೆ ಮಠದಲ್ಲಿ ನಮಾಜ್‌ ನಡೆದಿರುವುದು ಸರಿಯಲ್ಲ ಎಂದರು. 

ಬುದ್ದಿ ಹೆಚ್ಚಾದಾಗ ಚೀಲಕ್ಕೆ ಹಾಕಿಕೊಳ್ಳುತ್ತಾರೆ

ಮೈಸೂರಿನ ಕಲಾ ಮಂದಿರಲ್ಲಿ ಗೋಮಾಂಸ ಸೇವಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿ ಯಾರು ಹೆಚ್ಚು ತಿಳಿದಿರುತ್ತಾರೋ ಅವರಿಗೆ ಬುದ್ದಿ ಜಾಸ್ತಿಯಾದಾಗ ತಲೆಯಲ್ಲಿ ಜಾಗ ಇರುವುದಿಲ್ಲ. ಆವಾಗ ಬುದ್ದಿಯನ್ನು ಚೀಲದಲ್ಲಿ ಹಾಕಿಕೊಳ್ಳುತ್ತಾರೆ ಎಂದು ಪರೋಕ್ಷವಾಗಿ ಬುದ್ಧಿ ಜೀವಿಗಳಿಗೆ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next