Advertisement

ಬಾಲಕಿಯ ಪ್ರಾಣ ಬಲಿ ಪಡೆಯಿತು ದಸರಾ ಘಟ ವಿಸರ್ಜನೆ ಘಟನೆ!

03:54 PM Oct 16, 2021 | Team Udayavani |

ವಾಡಿ (ಚಿತ್ತಾಪುರ): ದೇವಿಯ ಹೆಸರಿನಲ್ಲಿ ಒಂಬತ್ತು ದಿನಗಳ ವರೆಗೆ ಮನೆಯಲ್ಲಿ ಹಾಕಲಾಗುವ ಭಕ್ತಿಯ ಘಟ ವಿಸರ್ಜನೆಯ ಮೆರವಣಿಗೆ ಬಾಲಕಿಯೊಬ್ಬಳ ಬಲಿ ಪಡೆದ ಘಟನೆ ಶನಿವಾರ ಬೆಳಗ್ಗೆ ಸಿಮೆಂಟ್ ನಗರಿ ವಾಡಿ ಪಟ್ಟಣದಲ್ಲಿ ಸಂಭವಿಸಿದೆ.

Advertisement

ಮನೆಯಲ್ಲಿ ಸ್ಥಾಪಿಸಲಾಗಿದ್ದ ಘಟ ಹೊತ್ತು ಕುಟುಂಬವೊಂದು ಟಾಟಾ ಎಸ್ ವಾಹನದಲ್ಲಿ ಕೊಂಚೂರು ಶ್ರೀ ಹನುಮಾನ ದೇವಸ್ಥಾನ ಸಮೀಪದ ಹಳ್ಳದಲ್ಲಿ ವಿಸರ್ಜಿಸುವ ಉದ್ದೇಶದಿಂದ ಹೊರಟಾಗ ಅಪಘಾತ ಸಂಭವಿಸಿದ್ದು, ಪಟ್ಟಣದ ಬಿಯ್ಯಾಬಾನಿ ‍ಪ್ರದೇಶದ ಅಶ್ವಿನಿ ರಾಮಚಂದ್ರ ಕಟ್ಟಿಮನಿ (9) ಎಂಬ ಬಾಲಕಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.

ಇದನ್ನೂ ಓದಿ: ನುಸ್ರತ್ ಜಹಾನ್ ಗೆ ಮದುವೆ ಆಗಿದೆಯೇ? ಪ್ರಶ್ನೆ ಹುಟ್ಟು ಹಾಕಿದ ಫೋಟೋ 

ಒಂದೇ ಕುಟುಂಬದ ಐವರು ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಎದುರಿಗೆ ಬರುತ್ತಿದ್ದ ಟ್ರಾಕ್ಟರ್ ಗೆ ದಾರಿ ಬಿಡಲು ಹೋಗಿ ಟಾಟಾ ಎಸ್ ವಾಹನ ಕಂದಕಕ್ಕೆ ಉರುಳಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಒರ್ವ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಾಲಕಿ ವೈಷ್ಣವಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ವಾಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next