Advertisement

ಶಿರೋಮಣಿ ಅಕಾಲಿ ದಳ್ ಬೆನ್ನಲ್ಲೇ ದಿಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಇಲ್ಲ ಎಂದ ಜೆಜೆಪಿ ಚೌಟಾಲಾ

10:13 AM Jan 22, 2020 | Nagendra Trasi |

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಜನನಾಯಕ್ ಜನತಾ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ವರಿಷ್ಠ, ಹರ್ಯಾಣ ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ ಮಂಗಳವಾರ ಘೋಷಿಸಿದ್ದಾರೆ.

Advertisement

ಜೆಜೆಪಿ ಪಕ್ಷಕ್ಕೆ ಪಕ್ಷದ ಚಿಹ್ನೆ ಸಿಗದ ಹಿನ್ನೆಲೆಯಲ್ಲಿ ನಾವು ದಿಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧಾರ ಕೈಗೊಂಡಿರುವುದಾಗಿ ಚೌಟಾಲಾ ಈ ಸಂದರ್ಭದಲ್ಲಿ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ನಿಲುವು ಬದಲಾಯಿಸಿಕೊಳ್ಳುವಂತೆ ಮೈತ್ರಿಕೂಟದ ಪಕ್ಷವಾದ ಬಿಜೆಪಿ ಶಿರೋಮಣಿ ಅಕಾಲಿ ದಳ್ (ಎಸ್ ಎಡಿ) ಮನವಿ ಮಾಡಿಕೊಂಡ ನಂತರ ದಿಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಎಸ್ ಎಡಿ ಸೋಮವಾರ ಘೋಷಿಸಿತ್ತು. ಇದಾದ ಬಳಿಕ ಜೆಜೆಪಿ ಕೂಡಾ ದಿಲ್ಲಿ ಚುನಾವಣೆಯಲ್ಲಿ ಅಖಾಡಕ್ಕಿಳಿಯುವುದಿಲ್ಲ ಎಂದು ತಿಳಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪಕ್ಷದ ನಿಲುವಿನ ಬಗ್ಗೆ ಮರು ವಿಮರ್ಶೆ ಮಾಡಿಕೊಳ್ಳಬೇಕೆಂದು ಬಿಜೆಪಿ ವಿನಂತಿಸಿಕೊಂಡಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಎಸ್ ಎಡಿ ಮುಖಂಡ ಮನ್ಜಿಂದರ್ ಸಿಂಗ್ ತಿಳಿಸಿದ್ದರು. ನಮ್ಮ ನಿಲುವು ಸ್ಪಷ್ಟವಾಗಿದ್ದು, ದೇಶವನ್ನು ಧರ್ಮ ಮತ್ತು ಜಾತಿ ಹೆಸರಿನಲ್ಲಿ ಇಬ್ಭಾಗ ಮಾಡುವುದನ್ನು ಒಪ್ಪುವುದಿಲ್ಲ. ಎಸ್ ಎಡಿ ಬಿಜೆಪಿ ಜತೆ ದೀರ್ಘಕಾಲದಿಂದ ಮೈತ್ರಿಯಲ್ಲಿದೆ. ಆದರೆ ದಿಲ್ಲಿ ಚುನಾವಣೆಯಲ್ಲಿ ನಾವು ಸ್ಪರ್ಧಿಸುವುದಿಲ್ಲ ಎಂದು ಸಿಂಗ್ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next