Advertisement

ಸಮಾಜದ ಸ್ವಾಸ್ಥ್ಯ ಹದಗೆಡಲು ದುಶ್ಚಟ ಕಾರಣ: ಡಾ|ಹೆಗ್ಗಡೆ 

04:29 PM Nov 01, 2017 | Team Udayavani |

ಬೆಳ್ತಂಗಡಿ: ಸಮಾಜದ ಸ್ವಾಸ್ಥ್ಯ ಹದಗೆಡಲು ದುಶ್ಚಟ ಪ್ರಮುಖ ಕಾರಣ. ಇದಕ್ಕೆ ಬಲಿಯಾದವರು ಕುಟುಂಬ, ಸಮಾಜವನ್ನು ನೆಮ್ಮದಿಯಾಗಿ ಇಡುವುದಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು 99ನೇ ವಿಶೇಷ ಮದ್ಯವರ್ಜನ ಶಿಬಿರದ ಕುಟುಂಬದ ದಿನಕ್ಕೆ ಹಾಜರಾದ ಶಿಬಿರಾರ್ಥಿಗಳು ಮತ್ತವರ ಕುಟುಂಬ ದವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಗಳವಾರ ಮಾಹಿತಿ ನೀಡಿದರು.

Advertisement

ನಿರ್ದೇಶಕ ವಿವೇಕ್‌ ವಿ. ಪಾ„ಸ್‌, ರಾಜ್ಯದ 65 ಶಿಬಿರಾರ್ಥಿಗಳು ಶಿಬಿರಕ್ಕೆ ಆಗಮಿಸಿದ್ದು, ಉತ್ತಮ ಚಿಕಿತ್ಸೆ ಮತ್ತು ಸಲಹೆಯೊಂದಿಗೆ ಮನಃಪರಿವರ್ತನೆ ಹೊಂದಿದ್ದಾರೆ. ಶ್ರೀ ಧ.ಮಂ. ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ತಿಂಗಳಿಗೆ ಎರಡರಂತೆ ವಿಶೇಷ ಶಿಬಿರಗಳು ನಡೆಯುತ್ತಿದ್ದು 100ನೇ ಶಿಬಿರವನ್ನು ನ. 6ರಂದು ಆರಂಭಿಸಿ 100 ವ್ಯಸನಿಗಳನ್ನು ಗುರುತಿಸಿ ಮನಃಪರಿವರ್ತನೆ ಮಾಡುವ ಗುರಿ ಹೊಂದಿದೆ ಎಂದರು. ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ,ಶಿಬಿರಾಧಿಕಾರಿಗಳಾದ ದಿವಾಕರ ಪೂಜಾರಿ, ನಾಗರಾಜ್‌, ನಾಗೇಶ್‌, ಆರೋಗ್ಯ ಸಹಾಯಕರಾದ ಚಿತ್ರಾ, ವೆಂಕಟೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next