Advertisement

Rain: ಶಿಥಿಲಗೊಂಡ ಶಾಲೆಗಳಿಗೆ ಮುಖ್ಯ ಶಿಕ್ಷಕರಿಂದ ರಜೆ ಘೋಷಣೆ

12:05 PM Jul 25, 2023 | Team Udayavani |

ಕನಕಗಿರಿ: ಕಳೆದ ಎರಡು ದಿನಗಳಿಂದ ಪಟ್ಟಣದಲ್ಲಿ ಕಾಡುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಇಲ್ಲಿನ ಕೆಲ ಶಾಲೆಗಳ ಕಟ್ಟಡಗಳು ಶಿಥಿಲಗೊಂಡ ಹಿನ್ನಲೆ ಆಯಾ   ಶಾಲೆಯ ಮುಖ್ಯಶಿಕ್ಷಕರಿಂದ‌ ಶಾಲೆಗೆ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ.

Advertisement

ಈ ಕುರಿತು ‘ಉದಯವಾಣಿ’ ಜೊತೆಗೆ ಮಾತನಾಡಿದ ಕೆಪಿಎಸ್ ಪ್ರೌಡ ಶಾಲೆಯ ಉಪ ಪ್ರಾಂಶುಪಾಲ ಜಗದೀಶ ಹಾದಿಮನಿ, ಪ್ರೌಡ ಶಾಲೆಯಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳುತ್ತಿದ್ದು, ಪ್ರೌಡ ಶಾಲೆಯ ಕೆಲವು ಕಟ್ಟಡಗಳು ದುರಸ್ತಿಗೊಂಡ ಹಿನ್ನಲೆ ಮಕ್ಕಳ‌ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮುಖ್ಯ ಶಿಕ್ಷಕರ ಹಂತದಲ್ಲಿ ರಜೆ ಘೋಷಣೆ ಮಾಡಲಾಗಿದ್ದು, ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗಳನ್ನು ಭಾನುವಾರದಂದು ಸರಿದೂಗಿಸಲಾಗುವುದು ಎಂದು  ಮಾಹಿತಿ ನೀಡಿದರು.

ಪಟ್ಟಣದ ಮೌಲಾನಾ ಅಜಾದ್, ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧ ಶಾಲೆಗಳಿಗೆ ಮುಖ್ಯ ಶಿಕ್ಷಕರು ರಜೆ ಘೋಷಣೆ ಮಾಡಿದ್ದಾರೆ.

ಯಥಾಸ್ಥಿತಿ: ಇಲ್ಲಿನ‌ ಅನುದಾನಿತ ಶಿವ ರುದ್ರಮುನಿ ಪ್ರೌಡ ಹಾಗೂ ಪಿಯು ಕಾಲೇಜು, ಸರ್ಕಾರಿ ಶಾಸಕರ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪದವಿ ಪೂರ್ವ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡಗಳು ಸುರಕ್ಷಿತವಾಗಿದ್ದು ತರಗತಿಗಳು ಯಥಾ ಸ್ಥಿತಿಯಂತೆ ಮುಂದುವರೆಸಲಾಗುತ್ತಿದೆ ಎಂದು ಶಾಲಾ- ಕಾಲೇಜುಗಳ ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next