Advertisement

Dubai; ಸೆ.10 ರಂದು ಗಲ್ಫ್ ಕರ್ನಾಟಕೋತ್ಸವ, ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

03:54 PM Aug 10, 2023 | Vishnudas Patil |

ದುಬೈ : ಗಲ್ಫ್ ಕರ್ನಾಟಕೋತ್ಸವ, ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯ ಅನಾವರಣ. ಗಲ್ಫ್ ದೇಶದಲ್ಲಿ ಸಾಧನೆ ಮಾಡಿರುವ ಕರ್ನಾಟಕದ ಅನರ್ಘ್ಯ ರತ್ನಗಳ ಸಮಾವೇಶ ದುಬಾಯಿಯ ಹೃದಯಭಾಗದಲ್ಲಿ ಸೆಪ್ಟೆಂಬರ್ 10 ರಂದು ಸಂಜೆ ಯುಎಇ ಯಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ಅದ್ಧೂರಿ ಸಮಾರಂಬಕ್ಕೆ ವಿಶ್ವದ ವಿವಿಧ ಭಾಗಗಳಿಂದ ಗಣ್ಯಾತಿ ಗಣ್ಯರ ಆಗಮನ. ಕಲಾ ತಂಡಗಳ ಆಕರ್ಷಕ ವರ್ಣ ರಂಜಿತ ಪ್ರದರ್ಶನ, ಸಹ ಭೋಜನ ವ್ಯವಸ್ಥೆಯೊಂದಿಗೆ ಕಾರ್ಯಕ್ರಮ ಗಲ್ಫ್ ಕರ್ನಾಟಕ ಉತ್ಸವ ಸಮಿತಿಯ ಆಶ್ರಯದಲ್ಲಿ ಆಯೋಜಿಸಲಾಗಿದೆ.

Advertisement

ಗಲ್ಫ್ ಕರ್ನಾಟಕೋತ್ಸವದಲ್ಲಿ ಕರ್ನಾಟಕದವರು ಗಲ್ಫ್ ದೇಶದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಈ ವರ್ಷ ಪ್ರದಾನಿಸಲಾಗುವ “ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿ 2023” ದುಬಾಯಿಯ ಪ್ರತಿಷ್ಠಿತ ಗ್ರ್ಯಾಂಡ್ ಹಯಾತ್ ಬನಿಯಾಸ್ ಬಾಲ್ ರೂಂ ಸಭಾಂಗಣದಲ್ಲಿ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಸಮಾರಂಭದ ಮುಖ್ಯ ಅತಿಥಿಯಾಗಿ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಮಾನ್ಯ ಶ್ರೀ ಡಿ. ಕೆ. ಶಿವಕುಮಾರ್ ಹಾಗೂ ಗೌರವ ಅತಿಥಿಯಾಗಿ ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರು ಮಾನ್ಯ ಯು.ಟಿ.ಖಾದರ್ ಮತ್ತು ಯುಎಇ ಯ ಆಡಳಿತ ದೊರೆಗಳ ಮನೆತನದ ಗೌರವಾನ್ವಿತರು ಪಾಲ್ಗೊಳ್ಳಲಿದ್ದಾರೆ.

ಗಲ್ಫ್ ಕರ್ನಾಟಕೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕನ್ನಡಿಗರು ಆಗಮಿಸಲಿದ್ದಾರೆ. ಸಮಾರಂಭದ ಸುಂದರ ಸಂಜೆಯಲ್ಲಿ ಕರ್ನಾಟಕ ಕಲಾವೈಭವದ ಅನಾವರಣ, ಯಕ್ಷಗಾನ, ಹುಲಿವೇಷ, ಆಕರ್ಷಕ ವರ್ಣ ರಂಜಿತ ನೃತ್ಯ ಸೊಬಗು, ಖ್ಯಾತ ರಸಮಂಜರಿ ತಂಡಗಳ ಸಂಗೀತ ಸಂಜೆ ಯ ಸವಿಯನ್ನು ಸವಿಯಲು ಗಣ್ಯರು, ಗಲ್ಫ್ ದೇಶದ ವಿವಿಧ ಕರ್ನಾಟಕ ಪರ ಸಂಘಟನೆಯ ಮುಖ್ಯಸ್ಥರುಗಳು ಸಾಕ್ಷಿಯಾಗಲಿದ್ದಾರೆ.
ಗಲ್ಫ್ ಕರ್ನಾಟಕೋತ್ಸವದಲ್ಲಿ ಮಾಧ್ಯಮಗಳು ವಿಶೇಷ ಪಾತ್ರ ವಹಿಸಲಿದೆ. ಪ್ರಮುಖ ವಾಹಿನಿಗಳು ಸಮಾರಂಭದ ನೇರ ಪ್ರಸಾರದ ಮೂಲಕ ವಿಶ್ವದಾದ್ಯಂತ ವೀಕ್ಷಕರಿಗೆ ಮುಟ್ಟಿಸಲು ಸಜ್ಜಾಗಿದೆ.

ಗಲ್ಫ್ ಕರ್ನಾಟಕೋತ್ಸವ – ಪಕ್ಷಿನೋಟ
ಗಲ್ಫ್ ಕರ್ನಾಟಕೋತ್ಸವ ವಾರ್ಷಿಕ ಅನಿವಾಸಿ ಕನ್ನಡಿಗರ ಸರ್ವ ಧರ್ಮ ಸಮನ್ವಯಕ್ಕೆ ಸಾಕ್ಷಿಯಾಗುವ ಅಂತಾರಾಷ್ಟ್ರೀಯ ಉತ್ಸವವಾಗಿದ್ದು ಗಲ್ಫ್ ದೇಶದಲ್ಲಿ ಸಾಧನೆ ಮಾಡಿರುವವರ ಸಾಧನೆಯನ್ನು ಪುರಸ್ಕರಿಸುವ ವೇದಿಕೆಯಾಗಿದ್ದು. ನಡೆದು ಬಂದಿರುವ ಹಾದಿಯ ಮೇಲೆ ಬೆಳಕು ಚೆಲ್ಲುವ ದಾಖಲೆಗಳ ಸಂಪುಟದ ಅನಾವರಣ ಹಾಗೂ ಅಭಿಮಾನಿ ಅನಿವಾಸಿ ಕನ್ನಡಿಗರ ಸಮಾವೇಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next