Advertisement

ದುಬೈ ದಸರಾ ಕಪ್‌ ಕ್ರಿಕೆಟ್‌: ಜೆರ್ಸಿ ಅನಾವರಣ

11:55 AM Nov 04, 2023 | Team Udayavani |

ಅಬುಧಾಬಿ:ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ಹೆಮ್ಮೆಯ ದುಬೈ ಕನ್ನಡ ಸಂಘದ ವತಿಯಿಂದ ನಡೆಯಲಿರುವ ವರ್ಷದ ಯುಎಇ ಕನ್ನಡಿಗರ ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವದ ಭಾಗವಾದ ದುಬೈ ದಸರಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಗಳ ದಸರಾ ಪೂರ್ವಭಾವಿ ಸಭೆ ಅ.21ರಂದು ಹೆಮ್ಮೆಯ ದುಬೈ ಕನ್ನಡ ಸಂಘದ ಸಲಹಾ ಸಮಿತಿ ಸದಸ್ಯರಾದ ಡಾ| ರಶ್ಮಿ ನಂದಕಿಶೋರ್‌ ಬೆಂಗಳೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಹಾದಿಯ ಮಂಡ್ಯ, ಮುಖ್ಯ ಕಾರ್ಯದರ್ಶಿ ರಫೀಕಲಿ ಕೊಡಗು, ಸಮಿತಿ ಸದಸ್ಯರುಗಳಾದ ವಿಷ್ಣುಮೂರ್ತಿ ಮೈಸೂರು, ಡಾ| ಸವಿತಾ ಮೈಸೂರು, ಅನಿತಾ ಬೆಂಗಳೂರು, ನವೀನ್‌ ಬೆಂಗಳೂರು, ಹಾದಿ ಕುಂದಾಪುರ, ರಜಿನಿ ಬೆಂಗಳೂರು ಮತ್ತು ಸಲಹಾ ಸಮಿತಿ ಸದಸ್ಯರಾದ ತೌಸೀಫ್ ಹುಬ್ಬಳಿ ಅವರು ಉಪಸ್ಥಿತರಿದ್ದರು.

ಪಂದ್ಯಾವಳಿಗಳ ವೇಳಾಪಟ್ಟಿ ತಯಾರಿ ಮತ್ತು ಆಯೋಜಕರೊಂದಿಗೆ ತಂಡದ ನಾಯಕರ ಸಮಾಲೋಚನೆ ಸಭೆ ಹಾಗೂ ತಂಡದ ಜೆರ್ಸಿ ಅನಾವರಣವು ಅ.22ರಂದು ಊದ್‌ ಮೆಹ್ತಾ ಪಾರ್ಕ್‌ನಲ್ಲಿ ನಡೆಯಿತು. ಆಯೋಜಕ ಸಮಿತಿ ಸದಸ್ಯರಾದ ರಫೀಕಲಿ ಕೊಡಗು, ಶಂಕರ್‌ ಬೆಳಗಾವಿ, ರಂಗ ಬೆಂಗಳೂರು ಅಯ್ಯಪ್ಪ, ನಜೀರ ಮಂಡ್ಯ ಮತ್ತು ತಂಡದ ನಾಯಕರು ಉಪಸ್ಥಿತರಿದ್ದರು.

ಕ್ರಿಕೆಟ್‌ ಪಂದ್ಯಾವಳಿಯ ಲೀಗ್‌ ಹಂತವು ನವೆಂಬರ್‌ನಲ್ಲಿ ಇಲ್ಲಿನ ಅಲ್‌ ಕ್ವಾಸಿಸ್‌ನ ಮೂರು ಮೈದಾನಗಳಲ್ಲಿ ಒಂದೇ ಸಮಯದಲ್ಲಿ ನಡೆಯಲಿದೆ. ಈ ಕ್ರಿಕೆಟ್‌ ಪಂದ್ಯಾವಳಿಗಳು ಸಂಯುಕ್ತ ಅರಬ್‌ ಸಂಸ್ಥಾನದಲ್ಲಿ ನೆಲಸಿರುವ ಸಮಸ್ತ ಅನಿವಾಸಿ ಪುರುಷ ಮತ್ತು ಮಹಿಳಾ ಕನ್ನಡಿಗರಿಗಾಗಿ ಆಯೋಜಿಸಲಾಗಿದೆ. ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಾವಳಿಗಳು ನವೆಂಬರ್‌ಗೆ ಶಾರ್ಜಾದಲ್ಲಿರುವ ಸ್ಕೈಲೈನ್‌ ಯೂನಿವರ್ಸಿಟಿಯಲ್ಲಿ ಹೊನಲು ಬೆಳಕಿನಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next