Advertisement

ಉಭಯ ಸಾಧಕರ ಆರಾಧನಾ ಮಹೋತ್ಸವ

12:30 AM Feb 03, 2019 | Team Udayavani |

ಉಡುಪಿ: ತಿರುಮಲ-ತಿರುಪತಿ ದೇವಸ್ಥಾನಗಳ ದಾಸಸಾಹಿತ್ಯ ಪ್ರಾಜೆಕ್ಟ್, ಶ್ರೀಮದುತ್ತ¤ರಾದಿ ಮಠದ ಆಶ್ರಯದಲ್ಲಿ ಮಠದ ಪರಂಪರೆಯಲ್ಲಿ ಬೆಳಗಿದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ದಾಸಶ್ರೇಷ್ಠ ಪುರಂದರದಾಸರ ಆರಾಧನಾ ಮಹೋತ್ಸವವನ್ನು ಶನಿವಾರ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉಡುಪಿ ಉತ್ತರಾದಿ ಮಠದಲ್ಲಿ ಉದ್ಘಾಟಿಸಿದರು.

Advertisement

ಶ್ರೀ ವಿದ್ಯಾಧೀಶತೀರ್ಥರ ಸುಧಾ ಗ್ರಂಥದ ವ್ಯಾಖ್ಯಾನ ಅದ್ಭುತವಾದುದು. ಶಾಸ್ತ್ರಗಳ ಸಾರವನ್ನು ಪುರಂದರದಾಸರೇ ಮೊದಲಾದವರು ಜನಸಾಮಾನ್ಯರಿಗೆ ತಿಳಿಯುವಂತೆ ರಚಿಸಿ ಮಹದುಪಕಾರ ಮಾಡಿದರು ಎಂದು ಶ್ರೀ ಪಲಿಮಾರು ಮಠಾಧೀಶರು ತಿಳಿಸಿದರು.

ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಆಶೀರ್ವಚನ ನೀಡಿದರು. ಟಿಟಿಡಿ ಪ್ರಾಜೆಕ್ಟ್ ಅಧಿಕಾರಿ ಗೋಪಾಲಾ ಚಾರ್ಯ ಸ್ವಾಗತಿಸಿದರು. ಉತ್ತರಾದಿ ಮಠದ ಅಧಿಕಾರಿ ಪ್ರಕಾಶಾಚಾರ್ಯ, ವಿದ್ವಾಂಸರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next