Advertisement

ಮಡಿಕೇರಿಯಲ್ಲಿ “ದೃಗಾಂತರ’

09:59 AM Jan 17, 2020 | Lakshmi GovindaRaj |

ಹೊಸಬರೇ ಸೇರಿ ಮಾಡಿರುವ “ದೃಗಾಂತರ’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದಿದೆ. ದೇವನಗರಿ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ರಂಜಿತ್‌ ಗೌಡ.ಕೆ, ನಿರ್ಮಾಣವಿರುವ ಚಿತ್ರದಲ್ಲಿ ಶೋಭರಾಜ್‌, ರಂಜಿತ್‌ ಗೌಡ ಪ್ರಮುಖ ಪಾತ್ರ ಮಾಡಿದ್ದಾರೆ. ಇವರು ಅಭಿನಯಿಸಿದ ದೃಶ್ಯಗಳನ್ನು ಮಡಿಕೇರಿಯಲ್ಲಿ ಚಿತ್ರಿಸಿಕೊಳ್ಳಲಾಗಿದೆ.

Advertisement

ಮಡಿಕೇರಿಯಲ್ಲಿ ಇವರ ಕಾಂಬಿನೇಷನ್‌ನಲ್ಲಿ ಹಲವಾರು ದೃಶ್ಯಗಳು ಹಾಗೂ ವಾಗ್ವಾದ ದೃಶ್ಯಗಳು ಚಿತ್ರೀಕರಣಗೊಂಡಿದೆ. ಚಿತ್ರವನ್ನು ಅಂಕಿತ್‌ ವಿ.ಹೆಗಡೆ ನಿರ್ದೇಶನ ಮಾಡುತ್ತಿದ್ದಾರೆ. ಗೌತಮ್‌ ಮೋಹನ್‌ ರಾಜ್‌ ಅವರ ಕಥೆ ಇದೆ. ಸನಿತ್‌ ಕುಮಾರ್‌ ಹಾಡುಗಳನ್ನು ಬರೆದಿದ್ದಾರೆ. ಜಿ.ಆರ್‌.ರಾಯನ್‌ ಸಂಗೀತವಿದೆ.

ನಾಗಾರ್ಜುನ್‌ ಶರ್ಮ, ಅಂಕಿತ್‌ ವಿ ಹೆಗಡೆ ಛಾಯಾಗ್ರಹಣ ಮಾಡಿದ್ದಾರೆ. ಜಗದೀಶ್‌ ಸಂಕಲನವಿದೆ. ಅನಿಲ್‌ ಕಲಾನಿರ್ದೇಶನ ಮಾಡಿದ್ದಾರೆ. “ದೃಗಾಂತರ’ ಒಂದು ಸೈಕಲಾಜಿಕಲ್‌ ಥ್ರಿಲ್ಲರ್‌ ಕಥಾವಸ್ತುವುಳ್ಳ ಚಿತ್ರ. ಚಿತ್ರದಲ್ಲಿ ರಂಜಿತ್‌ ಗೌಡ, ನಿಖೀತಾ ಸ್ವಾಮಿ, ಶೋಭರಾಜ್‌, ಲಕ್ಷ್ಮೀ ಭಟ್‌, ನಂದೀಶ್‌, ಸಂದೇಶ್‌ ಮುಂತಾದವರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next