Advertisement

ರಾಜ್ಯಮಟ್ಟದ ಈಜು ಸ್ಪರ್ಧೆಗೆ ಚಾಲನೆ

11:02 AM Apr 30, 2018 | Team Udayavani |

ಮಹಾನಗರ: ಮಂಗಳಾ ಸ್ವಿಮ್ಮಿಂಗ್‌ ಕ್ಲಬ್‌ ಹಾಗೂ ಕರ್ನಾಟಕ ಸ್ವಿಮ್ಮಿಂಗ್‌ ಅಸೋಸಿಯೇಶನ್‌ ಆಶ್ರಯದಲ್ಲಿ ರಾಜ್ಯ ಮಟ್ಟದ ಈಜು ಸ್ಪರ್ಧೆ ನಗರದ ಮಂಗಳಾ ಈಜುಕೊಳದಲ್ಲಿ ರವಿವಾರ ಉದ್ಘಾಟನೆಗೊಂಡಿತು. ಈಜು ತರಬೇತುದಾರ ದಿವಂಗತ ರವೀಶ್‌ ವಿ. ರಾವ್‌ ಸ್ಮರಣಾರ್ಥವಾಗಿ ನಡೆದ ಈಜು ಸ್ಪರ್ಧೆಯನ್ನು ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜಿನ ಪ್ರಿನ್ಸಿಪಾಲ್‌ ವಂ| ಪ್ರವೀಣ್‌ ಮಾರ್ಟಿಸ್‌ ಎಸ್‌.ಜೆ. ಉದ್ಘಾಟಿಸಿ ಶುಭ ಹಾರೈಸಿದರು.

Advertisement

ಶಿಲ್ಡ್‌ಗಳನ್ನು ವಂ| ಪ್ರವೀಣ್‌ ಮಾರ್ಟಿಸ್‌ ಸೇರಿದಂತೆ ಅತಿಥಿಗಳು ಅನಾವರಣಗೊಳಿಸಿದರು. ರಾಷ್ಟ್ರೀಯ ಈಜುಪಟು ಡಾ| ಸುದೇಶ್‌ ಶಾಸ್ತ್ರಿ, ಪುತ್ತೂರಿನ ಈಜು ತರಬೇತುದಾರ ವಿ. ಮನೋಹರ್‌ ರಾವ್‌, ಮಂಗಳಾ ಸ್ವಿಮ್ಮಿಂಗ್‌ ಕ್ಲಬ್‌ ಅಧ್ಯಕ್ಷ ಪ್ರಮುಖ್‌ ರೈ ವೈ.ಬಿ., ಕಾರ್ಯದರ್ಶಿ ಶಿವಾನಂದ ಗಟ್ಟಿ, ಖಜಾಂಚಿ ಧನಂಜಯ ಆರ್‌. ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next