Advertisement

ಮಂಗಳೂರಿನ ಸರೋಜಿನಿ ಶೆಟ್ಟಿ, ಉಡುಪಿಯ ಚಂದ್ರಹಾಸ ಸುವರ್ಣ ಅವರಿಗೆ ರಂಗ ಪ್ರಶಸ್ತಿ

12:58 AM May 30, 2022 | Team Udayavani |

ಬಳ್ಳಾರಿ: ಕರ್ನಾಟಕ ನಾಟಕ ಅಕಾಡೆಮಿಯು ಪ್ರಸಕ್ತ 2021-22ನೇ ಸಾಲಿಗೆ ಹೊಸಪೇಟೆಯ ಕನ್ನಡ ಕಲಾ ಸಂಘ ಸೇರಿ 31 ಕಲಾವಿದರಿಗೆ ಘೋಷಣೆ ಮಾಡಿದ್ದ ರಾಜ್ಯಮಟ್ಟದ ಜೀವಮಾನ ರಂಗಸಾಧನೆ ಪ್ರಶಸ್ತಿ, ವಾರ್ಷಿಕ ರಂಗ ಪ್ರಶಸ್ತಿ, ಯುವರಂಗ ಪ್ರಶಸ್ತಿ, ಗಡಿನಾಡ ರಂಗ ಪ್ರಶಸ್ತಿಗಳನ್ನು ರವಿವಾರ ಪ್ರದಾನ ಮಾಡಲಾಯಿತು.

Advertisement

ಜೋಳದರಾಶಿ ದೊಡ್ಡನ ಗೌಡ ರಂಗಮಂದಿರದಲ್ಲಿ ಅಕಾಡೆಮಿ ವತಿಯಿಂದ ಪಿಂಜಾರ್‌ ರಂಜಾನ್‌ ಸಾಬ್‌ ವೇದಿಕೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಚಿವ ಶ್ರೀರಾಮುಲು ಉದ್ಘಾಟಿಸಿದರು.

ಬೆಂಗಳೂರಿನ ರಂಗಭೂಮಿಯ ಅಣ್ಣ ಎಂದೇ ಖ್ಯಾತರಾದ ದತ್ತಾತ್ರೇಯ ಕುರಹಟ್ಟಿ ಅವರಿಗೆ ಜೀವಮಾನ ರಂಗಸಾಧನೆ ಪ್ರಶಸ್ತಿ ನೀಡಲಾಯಿತು. ಮಂಗಳೂರಿನ ಸರೋಜಿನಿ ಶೆಟ್ಟಿ, ಉಡುಪಿಯ ಚಂದ್ರಹಾಸ ಸುವರ್ಣ ಸೇರಿದಂತೆ ಹಲವಾರು ಮಂದಿಗೆ ವಾರ್ಷಿಕ ರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಮಂಜಮ್ಮ ಜೋಗತಿ ನುಡಿತೋರಣ ಪುಸ್ತಕ ಬಿಡುಗಡೆಗೊಳಿಸಿದರು. ಶಾಸಕ ಜಿ. ಸೋಮಶೇಖರ ರೆಡ್ಡಿ, ಜಾನಪದ, ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಬೆಳಗಲ್ಲು ವೀರಣ್ಣ, ಅಕಾಡೆಮಿ ಅಧ್ಯಕ್ಷ ಆರ್‌.ಭೀಮಸೇನ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next