Advertisement

ಡಾ.ವಿಷ್ಣುವರ್ಧನ್ 11 ನೇ ಪುಣ್ಯತಿಥಿ: ನಟರು, ಅಭಿಮಾನಿಗಳಿಂದ ಗೌರವಾರ್ಪಣೆ

05:16 PM Dec 30, 2020 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರು ತಮ್ಮ ಅಭಿಮಾನಿಗಳನ್ನು ಅಗಲಿ ಇಂದಿಗೆ 11 ವಸಂತಗಳು ಕಳೆದಿದೆ. ಈ ಹಿನ್ನೆಲೆಯಲ್ಲಿ ಪತ್ನಿ ಭಾರತಿ ವಿಷ್ಣುವರ್ಧನ್ ಅವರನ್ನೂ ಒಳಗೊಂಡಂತೆ ಹಲವಾರು ಸಿನಿ ತಾರೆಯರು ಹಾಗೂ ಅಭಿಮಾನಿಗಳು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದ ಆವರಣದಲ್ಲಿರುವ ವಿಷ್ಣುವರ್ಧನ್  ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.

Advertisement

ಈ ಹಿನ್ನೆಲೆಯಲ್ಲಿ (ಡಿ 30- 2020) ಡಾ.ವಿಷ್ಣುವರ್ಧನ್ ಅವರ  ಅಳಿಯ ಅನಿರುದ್ಧ ಒಳಗೊಂಡಂತೆ ಹಲವಾರು ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಪೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿಷ್ಣು ದಾದರನ್ನು ಸ್ಮರಿಸಿದ್ದಾರೆ.

ಈ ಕುರಿತಾಗಿ ಟ್ಟೀಟ್ ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್,  “ಇವರ ಮೇಲೆ ಅಭಿಮಾನ ಎಂದಿಗೂ ಕಮ್ಮಿಯಾಗಿಲ್ಲ ,ಅಭಿಮಾನಿಗಳ ಹೃದಯದಲ್ಲಿ ಸದಾ ಯಜಮಾನನಾಗಿರುವ ನಮ್ಮೆಲ್ಲರ ಸಾಹಸಸಿಂಹ, ಅಭಿನಯ ಭಾರ್ಗವ ವಿಷ್ಣು ದಾದಾ ನೀವು ನಮ್ಮ ಹೃದಯದಲ್ಲಿ ಸದಾ ಜೀವಂತ ಎಂಬುದಾಗಿ ಬರೆದುಕೊಂಡಿದ್ದಾರೆ. ದರ್ಶನ್ ಅವರು ಡಾ .ವಿಷ್ಣುವರ್ಧನ್ ಅವರ ಕೆಲ ಸಿನಿಮಾಗಳಲ್ಲಿ ಅಥಿತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:ರಾತ್ರಿ ಕರ್ಫ್ಯೂ ವಿಚಾರ: ಸಚಿವರುಗಳ ಭಿನ್ನ ಹೇಳಿಕೆ, ಬಗೆಹರಿಯದ ಗೊಂದಲ!   

ಇನ್ನು ನಟಿ ಸಂಸದೆ ಸುಮಲತಾ ಅವರು ಕೂಡ  ಟ್ಟೀಟ್ ಮಾಡಿದ್ದು, ಸ್ನೇಹ, ಪ್ರೀತಿಗೆ ಸಾಕಾರ ರೂಪವಾಗಿದ್ದ ನಮ್ಮ ವಿಷ್ಣುವರ್ಧನ್ ಅವರು ನಮ್ಮ ಕಣ್ಣ ಮುಂದೆ ಇರದೆ ಇರಬಹುದು, ಆದರೆ ನಮ್ಮ ನಿಶ್ಚಲ ಯೋಚನೆಗಳಲ್ಲಿ, ಚೈತನ್ಯದ ಯೋಜನೆಗಳಲ್ಲಿ ಸದಾ ಜೀವಂತವಾಗಿರುತ್ತಾರೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಅಂಬರೀಶ್, ವಿಷ್ಣುವರ್ಧನ್ ಅವರು ಒಟ್ಟಾಗಿ ಕುಳಿತುಕೊಂಡಿರುವ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next