Advertisement

ಆರ್‌ಬಿಐಯ ಎಂಪಿಸಿಗೆ ಡಾ|ಶಶಾಂಕ ಭಿಡೆ ನೇಮಕ

12:07 PM Nov 03, 2015 | Hari Prasad |

ಬೆಳ್ತಂಗಡಿ/ ಹೊಸದಿಲ್ಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)ನ ವಿತ್ತೀಯ ನೀತಿ ಸಮಿತಿ (ಎಂಪಿಸಿ)ಯ ಸದಸ್ಯರಾಗಿ ಹಿರಿಯ ವಿತ್ತತಜ್ಞ, ಬೆಳ್ತಂಗಡಿ ತಾಲೂಕಿನ ಮುಂಡಾಜೆ ಮೂಲದ ಡಾ| ಶಶಾಂಕ ಭಿಡೆ ಆಯ್ಕೆಯಾಗಿದ್ದಾರೆ.

Advertisement

ಡಾ| ಭಿಡೆ ಅವರು ಮನಮೋಹನ್‌ ಸಿಂಗ್‌ ವಿತ್ತ ಸಚಿವರಾಗಿದ್ದಾಗ ಹಣಕಾಸು ಇಲಾಖೆಯಲ್ಲಿ, ಬಳಿಕ ಹೊಸದಿಲ್ಲಿಯ ಎನ್‌ಸಿಎಇಆರ್‌ನಲ್ಲಿ ಸಂಶೋಧನ ಕೌನ್ಸಿಲರ್‌ ಆಗಿ ಸೇವೆ ಸಲ್ಲಿಸಿದ್ದರು. ಅವರು ಮುಂಡಾಜೆಯ ಜಿ.ಎನ್‌. ಭಿಡೆ ಅವರ ಪುತ್ರ.

ಇಂದಿನಿಂದ ಎಂಪಿಸಿ ತ್ರಿದಿನ ಸಭೆ
ಎಂಪಿಸಿಯ 3 ದಿನಗಳ ಸಭೆ ಬುಧವಾರ ಆರಂಭವಾಗಲಿದೆ. ಸಭೆಯಲ್ಲಿ ಸಾಲಗಳ ಮೂಲ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಇರಿಸುವ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next