Advertisement

ಡಾ.ಶಂಕರೇಗೌಡ ಆರೋಗ್ಯ ವೃದ್ದಿಗಾಗಿ 101 ಈಡುಗಾಯಿ ಹರಿಕೆ, ವಿಶೇಷ ಪೂಜೆ

02:07 PM May 27, 2022 | Team Udayavani |

ಶ್ರೀರಂಗಪಟ್ಟಣ: ತೀವ್ರ ಹೃದಯಾಘಾತದಿಂದ ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಡ್ಯದ ಪ್ರಸಿದ್ದ ಚರ್ಮರೋಗ ತಜ್ಞ ವೈದ್ಯ ಡಾ. ಶಂಕರೇಗೌಡರ ಆರೋಗ್ಯ ವೃದ್ದಿಗಾಗಿ ಇಂದು ಶ್ರೀರಂಗಪಟ್ಟಣದಲ್ಲಿ  ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ  ಶ್ರೀರಂಗನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

Advertisement

ಶುಕ್ರವಾರ ಬೆಳಿಗ್ಗೆ ಪಟ್ಟಣದ ಶ್ರೀ ರಂಗನಾಥ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇಗುಲದ ಮುಂಭಾಗ 101 ಹರಿಕೆ ತೆಂಗಿನಕಾಯಿ ಈಡುಗಾಯಿ ಒಡೆದು ಶಂಕರೇಗೌಡರ ಆರೋಗ್ಯ ವೃದ್ದಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಇದನ್ನೂ ಓದಿ:ವಡಗಾಂವದಲ್ಲಿ ಸಚಿವ ಅಶೋಕ್ ಗ್ರಾಮವಾಸ್ತವ್ಯ: ಮೆರವಣಿಗೆ ಮೂಲಕ ಸ್ವಾಗತ

ಮಂಡ್ಯ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶಂಕರ್ ಬಾಬು, ಜಗದೀಶ್, ರವಿ, ಚಿದಂಬರ ಜ್ಞಾನೇಶ್ ಚಂದಗಿರಿಕೊಪ್ಪಲು, ಸೇರಿದಂತೆ ಇತರ ವೇದಿಕೆ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next