Advertisement

ಡಾ|ರಾಜೇಂದ್ರ ಕುಮಾರ್‌ಗೆ ರಾಷ್ಟ್ರೀಯ ಪ್ರಶಸ್ತಿ

09:15 AM Sep 10, 2017 | Team Udayavani |

ಮಂಗಳೂರು: ಮಂಗಳೂರು ಬ್ಯಾಂಕಿಂಗ್‌ ಫ್ರೊಂಟಿಯರ್ ಮುಂಬಯಿಯ 11ನೇ ವರ್ಷದ ಫ್ರೊಂಟಿ ಯರ್ ಇನ್‌ ಕೋ-ಆಪರೇಟಿವ್‌ ಬ್ಯಾಂಕಿಂಗ್‌ ಅವಾರ್ಡ್‌-2017 (ಎಫ್‌ಸಿಬಿಎ)ರ ಬೆಸ್ಟ್‌ ಚೇರ್‌ಮನ್‌ ರಾಷ್ಟ್ರೀಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಎಸ್‌ಸಿಡಿಸಿಸಿ ಬ್ಯಾಂಕ್‌)ನ ಅಧ್ಯಕ್ಷ ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಅವರಿಗೆ ಪ್ರದಾನ ಮಾಡಲಾಯಿತು.

Advertisement

ಜೈಪುರದಲ್ಲಿ ನಡೆದ ನ್ಯಾಶನಲ್‌ ಕೋ-ಆಪರೇಟಿವ್‌ ಬ್ಯಾಂಕುಗಳ ಸಮಾವೇಶದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಪುಣೆ ಕೋ- ಆಪರೇಟಿವ್‌ ಫೆಡರೇಶನ್‌ ಅಧ್ಯಕ್ಷೆ ಶೋಭಾ ತಾç ಅವರಿಂದ ಸ್ವೀಕರಿಸಿದರು.

ಉತ್ಕೃಷ್ಟ ಸೇವೆ
ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರಿಗೆ ಬ್ಯಾಂಕಿಂಗ್‌ ಪರಿಕಲ್ಪನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರದ್ದು. ಬ್ಯಾಂಕ್‌ ತನ್ನ 102 ಶಾಖೆಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಗ್ರಾಹಕರಿಗೆ ಉತ್ಕೃಷ್ಟ ಸೇವೆ ನೀಡುತ್ತಿದೆ. ಸಹಕಾರಿ ಸ್ವಾಮ್ಯದ ಎಸ್‌ಸಿಡಿಸಿಸಿ ಬ್ಯಾಂಕನ್ನು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಸಮಾನಾಗಿ ರೂಪುಗೊಳಿಸಿದ ಡಾ| ರಾಜೇಂದ್ರ ಕುಮಾರ್‌ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿರುವರು.

ಕೋ-ಆಪರೇಟಿವ್‌ ಬ್ಯಾಂಕ್‌ ಅಸೋಸಿಯೇಷನ್‌ ಸೋಲಾಪುರದ ಅಧ್ಯಕ್ಷ ರಾಜಗೋಪಾಲ್‌, ಆದರ್ಶ ಕೋ-ಆಪರೇಟಿವ್‌ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮದನ್‌ಗೊàಪಾಲ್‌ ಸ್ವಾಮಿ, ಮಾಸ್ಟರ್‌ ಕಾರ್ಡ್‌ ಇಂಡಿಯಾದ ಮ್ಯಾನೇಜಿಂಗ್‌ ನಿರ್ದೇಶಕ ಮನೋಜ್‌ ಅಗ್ರವಾಲ್‌ ಮತ್ತು ಬ್ಯಾಂಕಿಂಗ್‌ ಫ್ರೊಂಟಿಯರ್ ಮ್ಯಾಗಜಿನ್‌ನ ಪ್ರಕಾಶಕ ಬಾಬು ನಾಯರ್‌ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅರುಣಾ ರಾಜೇಂದ್ರ ಕುಮಾರ್‌, ಬ್ಯಾಂಕಿನ ನಿರ್ದೇಶಕರಾದ ವಿನಯ ಕುಮಾರ್‌ ಸೂರಿಂಜೆ, ಟಿ.ಜಿ. ರಾಜಾರಾಮ್‌ ಭಟ್‌, ಭಾಸ್ಕರ ಎಸ್‌.ಕೋಟ್ಯಾನ್‌, ಬಿ. ರಘುರಾಮ ಶೆಟ್ಟಿ,ಎಂ.ವಾದಿರಾಜ ಶೆಟ್ಟಿ. ಕೆ.ಎಸ್‌. ದೇವರಾಜ್‌, ಸದಾಶಿವ ಉಳ್ಳಾಲ, ಎಸ್‌. ರಾಜು ಪೂಜಾರಿ, ಶಶಿಕುಮಾರ್‌ ರೈ, ರಾಜೇಶ್‌ ರಾವ್‌, ಎಸ್‌.ಬಿ. ಜಯರಾಮ್‌ ರೈ, ಐಕಳ ಭಾವ ದೇವಿಪ್ರಸಾದ್‌ ಶೆಟ್ಟಿ ಬೆಳಪು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್‌ ಎಸ್‌.,
ದ.ಕ. ಜಿ. ಸಹಕಾರಿ ಯೂನಿಯನ್‌ ಅಧ್ಯಕ್ಷ ಹರೀಶ್‌ ಆಚಾರ್ಯ, ಸ್ಕಾ éಡ್ಸ್‌ ಅಧ್ಯಕ್ಷ ರವೀಂದ್ರ ಕಂಬಳಿ, ಟೀಚರ್ ಕೋ-ಆಪರೇಟಿವ್‌ ಬ್ಯಾಂಕಿನ ನಿರ್ದೇಶಕ ಕೆ.ಸಿ. ರಾಜೇಶ್‌ ಹಾಗೂ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next