Advertisement

Puttur: ಎಚ್ಚರ,ರಸ್ತೆಗೆ ಉರುಳಲು ಸಿದ್ಧವಾಗಿವೆ ಹತ್ತಾರು ಮರಗಳು

12:03 PM Aug 03, 2024 | Team Udayavani |

ಪುತ್ತೂರು: ಯಾತ್ರಾ ಸ್ಥಳ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಬೆಳ್ಳಾರೆ-ಪುದ್ದೊಟ್ಟು-ಸವಣೂರು ರಸ್ತೆಯ ಬದಿಗಳಲ್ಲಿ ಬೃಹತ್‌ ಗಾತ್ರದ ಮರಗಳು ಬುಡ ಸಹಿತ ಇಲಾಖೆಯು ಮುಂದಾಗಿಲ್ಲ ದಿನಂಪ್ರತಿ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಏಕಾಏಕಿ ಮರಗಳು ಉರುಳುತ್ತಿದ್ದು ಪ್ರಾಣ ಭೀತಿಯಿಂದಲೇ ವಾಹನಗಳನ್ನು ಚಲಾಯಿಸುವ ಸ್ಥಿತಿ ಇಲ್ಲಿನದ್ದಾಗಿದೆ.
ಬೆಳ್ಳಾರೆಯಿಂದ ಪೆರುವಾಜೆ ಮುಂದಕ್ಕೆ ಕಾಪುಕಾಡಿನ ಮಧ್ಯೆ ಈ ರಸ್ತೆ ಹಾದು ಹೋಗಿದೆ. ಇಲ್ಲಿ ರಸ್ತೆ ದಾಟಲು ಎಂಟೆದೆ ಬೇಕು ಅನ್ನುವ ಸ್ಥಿತಿ ಇದೆ. ಕಾಪು ಕಾಡಿನ ಎರಡು ಬದಿಗಳಲ್ಲಿ ಹತ್ತಾರು ಮರಗಳು ರಸ್ತೆಗೆ ಬುಡ ಸಹಿತ ವಾಲಿ ನಿಂತಿದೆ. ಅಲ್ಲಲ್ಲಿ ಕಾಡಿನ ಬದಿಗಳಲ್ಲಿ ಭೂ ಕುಸಿತ ಉಂಟಾಗಿದ್ದು ಒಸರು ನೀರು ತುಂಬಿ ಯಾವ ಕ್ಷಣದಲ್ಲಾದರೂ ಇಲ್ಲಿ ಮರ ಬೀಳುವ ಅಪಾಯ ಇದೆ.

Advertisement

ರಸ್ತೆಗೆ ನುಗ್ಗುವ ನೀರು
ಮಾಪ್ಲಮಜಲು ಬಳಿ ಪ್ರತೀ ಮಳೆಗಾಲದಲ್ಲಿಯು ಭಾರೀ ಮಳೆಯ ಸಂದರ್ಭ ಗೌರಿ ಹೊಳೆಯ ನೀರು ರಸ್ತೆಗೆ ನುಗ್ಗಿ ಕೆಲವು ತಾಸು ಸಂಚಾರ ಸ್ಥಗಿತವಾಗುತ್ತದೆ. ಈ ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲ. ಸವಣೂರಿನಿಂದ ಕಾಪು ತನಕ ಪುತ್ತೂರು ಲೋಕೋಪಯೋಗಿ ಇಲಾಖೆ, ಕಾಪುಕಾಡಿನಿಂದ ಬೆಳ್ಳಾರೆ ತನಕ ಸುಳ್ಯ ಉಪವಿಭಾಗಕ್ಕೆ ಸೇರಿರುವ ರಸ್ತೆ ಇದಾಗಿದ್ದು ಮಾಪ್ಲಮಜಲು ಸ್ಥಳ ಸುಳ್ಯ ಉಪ ವಿಭಾಗದ ವ್ಯಾಪ್ತಿಯಲ್ಲಿದೆ. ಈ ಹಿಂದೆ 3.5 ಕೋ. ರೂ.ವೆಚ್ಚದಲ್ಲಿ ರಸ್ತೆ ವಿಸ್ತರಣೆ, ಅಭಿವೃದ್ಧಿ ಕೆಲಸ ನಡೆದಿತ್ತು. ಆ ವೇಳೆ ರಸ್ತೆಯನ್ನು ಎತ್ತರಿಸಿ, ಹೊಳೆ ಬದಿಗೆ ತಡೆಗೋಡೆ ನಿರ್ಮಿಸುವಂತೆ ಜನರು ಬೇಡಿಕೆ ಇಟ್ಟಿದ್ದರೂ ಇಲಾಖೆ ಅದಕ್ಕೆ ಸ್ಪಂದನೆ ನೀಡಿರಲಿಲ್ಲ. ತಗ್ಗು ರಸ್ತೆಗೆ ಡಾಮರು ಹಾಕಲಾಗಿತ್ತು. ಇದರ ಪರಿಣಾಮ ಹೊಳೆ ಭಾಗದಲ್ಲಿ ಕುಸಿತ ಕಂಡಿದ್ದು ರಸ್ತೆಯ ಒಂದು ಬದಿ ಬಿರುಕು ಬಿಟ್ಟಿದೆ.

ಪ್ರಮುಖ ಸಂಪರ್ಕ ರಸ್ತೆ
ಶಾಂತಿಮೊಗರು ಬಳಿ ಕುಮಾರಧಾರಾ ನದಿಗೆ ಸೇತುವೆ ನಿರ್ಮಾಣಗೊಂಡ ಬಳಿಕ
ಯಾತ್ರಾರ್ಥಿಗಳಿಗೆ ಕಡಿಮೆ ದೂರ, ಅವಧಿಯಲ್ಲಿ ಬೆಳ್ಳಾರೆ -ಪೆರುವಾಜೆ -ಸವಣೂರು ಸಂಪರ್ಕ ರಸ್ತೆ ಮೂಲಕ ಧರ್ಮಸ್ಥಳಕ್ಕೆ ತೆರಳಲು ಅನುಕೂಲಕರವೆನಿಸಿದೆ. ಮೈಸೂರು, ಮಡಿಕೇರಿ, ಕಾಸರಗೋಡು, ಸುಳ್ಯ ಸೇರಿದಂತೆ
ತಾಲೂಕು, ಹೊರ ಜಿಲ್ಲೆಯ ಜನರು ಧರ್ಮಸ್ಥಳಕ್ಕೆ ಕ್ಷೇತ್ರಕ್ಕೆ ತೆರಳಲುಈ ರಸ್ತೆಯನ್ನು ಬಳಸುತ್ತಾರೆ.

ಪೆರುವಾಜೆ, ಸವಣೂರು, ಬೆಳಂದೂರಿನಲ್ಲಿ ಪ್ರಥಮ ದರ್ಜೆ ಕಾಲೇಜು, ಕಡಬ ತಾಲೂಕು ಕೇಂದ್ರ, ಆಲಂಕಾರು, ನೆಲ್ಯಾಡಿ ಮೊದಲಾದೆಡೆ ತೆರಳಲು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.

ತೆರವಿಗೆ ಸೂಚನೆ ಅಪಾಯಕಾರಿ ಮರಗಳನ್ನು ತೆರವು ಮಾಡಲು ಅರಣ್ಯ ಇಲಾಖೆಗೆ ಸೂಚಿಸುತ್ತೇನೆ. ವಾಹನ ಸವಾರರು ಸಹಿತ ಜನರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸುವಂತೆಲೋಕೋಪಯೋಗಿ, ಅರಣ್ಯ ಇಲಾಖೆಗೆ ತತ್‌ ಕ್ಷಣ ನಿರ್ದೇಶನ ನೀಡುತ್ತೇನೆ.

Advertisement

– ಜುಬಿನ್‌ ಮೊಹಾಪಾತ್ರ, ಸಹಾಯಕ ಆಯುಕ್ತ, ಪುತ್ತೂರು ಉಪವಿಭಾಗ

ಉಸ್ತುವಾರಿ ಸಚಿವರಿಗೆ ತಿಳಿಸಲಾಗುವುದು
ರಸ್ತೆಗೆ ನೀರು ನುಗ್ಗುವ ಗೌರಿ ಹೊಳೆ ಭಾಗದಲ್ಲಿ ತಡೆಗೋಡೆ ನಿರ್ಮಿಸಲು ಗ್ರಾ.ಪಂ.ನಿಂದ ಮನವಿ ಮಾಡಿದ್ದರೂ ಲೋಕೋಪಯೋಗಿ ಇಲಾಖೆ ಸ್ಪಂದನೆ ನೀಡಿಲ್ಲ. ಮರಗಳು ರಸ್ತೆ ಬೀಳಲು ಅಣಿಯಾಗಿದ್ದು ಇದರ ತೆರವಿಗೆ ಅರಣ್ಯ ಇಲಾಖೆ ಮುಂದಾಗುತ್ತಿಲ್ಲ. ಸಮಸ್ಯೆಯ ಗಂಭೀರತೆಯನ್ನು ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು.

-ಜಗನ್ನಾಥ ಪೂಜಾರಿ ಮುಕ್ಕೂರು, ಅಧ್ಯಕ್ಷ, ಪೆರುವಾಜೆ ಗ್ರಾ.ಪಂ.

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next