Advertisement

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ಯಾಕ್ಟರ್ : ಪ್ರಾಣಾಪಾಯದಿಂದ ಪಾರಾದ ಕೂಲಿ ಕಾರ್ಮಿಕರು

08:02 PM Jul 17, 2022 | Team Udayavani |

ದೋಟಿಹಾಳ : ಇಲ್ಲಿಗೆ ಸಮೀಪದ ಕೆ.ಬೋದೂರ ಗ್ರಾಮದ ಹತ್ತಿರ ಬಿಜಕಲ್ ಗ್ರಾಮ ಪಂಚಾಯತಿಯ ಕೂಲಿ ಕಾರ್ಮಿಕರ ಟ್ಯಾಕ್ಟರ್ ಪಲ್ಟಿಯಾಗಿ ಅದರಲ್ಲಿದ್ದ ಕಾರ್ಮಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ನಡೆದಿದೆ.

Advertisement

ದೋಟಿಹಾಳ ಸಮೀಪದ ಬಿಜಕಲ್ ಗ್ರಾಮ ಪಂಚಾಯತಿ ಕೂಲಿಕಾರ್ಮಿಕರಿಗೆ ಹೊಸಳ್ಳಿ ಕೆರೆಯಲ್ಲಿ ಕೆರೆ ಹೂಳು ಎತ್ತುವ ಕೆಲಸಕ್ಕೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ 2022-23ನೇ ಸಾಲಿನಲ್ಲಿ ಸುಮಾರು 40-50 ಲಕ್ಷ ರೂ,ಗಳ ಯೋಜನೆಯನ್ನು ತಯಾರಿ ಸುಮಾರು 1200-1500 ಜನ ಕಾರ್ಮಿಕರಿಗೆ ಆರು ದಿನಗಳ ಕೆಲಸವನ್ನು ಗ್ರಾ.ಪಂನವರು ನೀಡಿದಾರೆ.

ಈ ಕೆರೆ ಹೂಳು ಎತ್ತುವ ಕೆಲಸ ಕಳೆದ ಎರಡು ದಿನಗಳಿಂದ ಆರಂಭವಾಗಿದ್ದು ರವಿವಾರ ಕೂಲಿಕಾರ್ಮಿಕರು ಕೆಲಸ ಮುಗಿಸಿ ಊರಿಗೆ ಮರಳಿ ಬರುವ ವೇಳೆ ಕೆ.ಬೋದೂರ ಗ್ರಾಮದ ಹತ್ತಿರ ಬರುವ ವೇಳೆ ಟ್ಯಾಕ್ಟರ್ ಪಲ್ಟಿಯಾಗಿದೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಗಾಯಾಗೊಂಡ ಕಾರ್ಮಿಕರಿಗೆ ಕುಷ್ಟಗಿ ಆಸ್ಪತ್ಸೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇಬ್ಬರು ಕಾರ್ಮಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಗೆ ಕಳಿಸಲಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಒಂದು ಕೋಟಿ ರಾಷ್ಟ್ರ ಧ್ವಜಗಳನ್ನು ಹಾರಿಸಲು ಕ್ರಮ: ಸಿಎಂ ಬೊಮ್ಮಾಯಿ

Advertisement

Advertisement

Udayavani is now on Telegram. Click here to join our channel and stay updated with the latest news.

Next