Advertisement

ಕಡತಗಳ ಪುಟ ತಿರುಗಿಸಲು ಎಂಜಲು ಬಳಸಬೇಡಿ: ಅಧಿಕಾರಿಗಳಿಗೆ ಸರಕಾರದ ಆದೇಶ

09:58 AM Feb 25, 2020 | keerthan |

ಲಕ್ನೋ: ದೊಡ್ಡ ದೊಡ್ಡ ಕಡತಗಳ, ಪುಸ್ತಕಗಳ ಪುಟ ತಿರುಗಿಸಲು ಎಂಜಲು ಬಳಸುವುದನ್ನು ನಾವು ನೋಡಿದ್ದೇವೆ. ಆದರೆ ಇದೀಗ ಕಡತಗಳ ಪುಟ ತಿರುಗಿಸಲು ಎಂಜಲು ಬಳಸದಂತೆ ಉತ್ತರ ಪ್ರದೇಶದ ರಾಯ್ ಬರೇಲಿಯ ಸಿಇಓ ತನ್ನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಹೀಗೆ ಎಂಜಲು ಬಳಸಿ ಪುಟ ತಿರುಗಿಸುವ ಕಾರಣದಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವುದಿಂದ ಸಿಇಓ ಅಭಿಷೇಕ್ ಗೋಯಲ್ ಈ ಆದೇಶ ಹೊರಡಿಸಿದ್ದಾರೆ.

ಅಧಿಕಾರಿಗಳು ಎಂಜಲು ಬಳಸಿ ಪುಟ ತಿರುಗಿಸುವುದು ಗಮನಕ್ಕೆ ಬಂದಿದೆ. ಇನ್ನು ಮುಂದೆ ಜಿಲ್ಲಾ ಮಟ್ಟದ ಮತ್ತು ಬ್ಲಾಕ್ ಮಟ್ಟದ ಎಲ್ಲಾ ಅಧಿಕಾರಿಗಳು ನೀರು ಸ್ಪಾಂಜ್ ಗಳನ್ನು ತಮ್ಮ ಬಳಿ ಇರಿಸಿಕೊಳ್ಳಬೇಕು. ಇದಿರಿಂದ ಎಂಜಲಿನಿಂದ ಪುಟ ತಿರುಗಿಸುವುದು ತಪ್ಪುತ್ತದೆ. ಮತ್ತು ರೋಗ ಹರಡುವುದನ್ನು ಕಡಿಮೆ ಮಾಡಬಹದು ಎಂದು ಅಭಿಷೇಕ್ ಗೋಯಲ್ ಆದೇಶದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next