Advertisement

ನನ್ನನ್ನು ಅತೃಪ್ತರ ಗುಂಪಿಗೆ ಸೇರಿಸಬೇಡಿ: ಗಣೇಶ್‌

11:08 PM Jul 24, 2019 | Team Udayavani |

ಬೆಂಗಳೂರು: “ನನ್ನನ್ನು ಅತೃಪ್ತರ ಗುಂಪಿಗೆ ಸೇರಿಸಬೇಡಿ, ನನ್ನ ನಿರ್ಧಾರ ಸ್ಪಷ್ಟ. ನಾನು ಕಾಂಗ್ರೆಸ್‌ನಲ್ಲಿಯೇ ಇದ್ದೇನೆ. ಮುಂದೆಯೂ ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ’ ಎಂದು ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ಸ್ಪಷ್ಟಪಡಿಸಿದ್ದಾರೆ.

Advertisement

ಬುಧವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯಾವುದೇ ಕಾರಣಕ್ಕೂ ನಾನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಬಿಜೆಪಿಗೆ ಈಗ ಅಧಿಕಾರ ಬರಬಹುದು.ಅದು ಶಾಶ್ವತ ಅಲ್ಲ. ಮೂರು ವರ್ಷ ಅವರು ಏನು ಮಾಡುತ್ತಾರೆ ನೋಡೋಣ. ನಮಗೂ ಅಧಿಕಾರದ ಆಸೆಯಿದೆ, ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next