Advertisement

ಎರಡನೇ ಬಾರಿಗೆ ಶರದ್‌ ಪವಾರ್‌ ಜತೆಗೆ ಅಜಿತ್‌ ಗುಂಪಿನ ಭೇಟಿ

10:36 PM Jul 17, 2023 | Team Udayavani |

ಮುಂಬೈ:“ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ’. ಹೀಗೆಂದು ಹೇಳಿದ್ದು ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌. ಮುಂಬೈನಲ್ಲಿ ಸತತ ಎರಡನೇ ದಿನವಾದ ಸೋಮವಾರ ಕೂಡ ಅಜಿತ್‌ ಪವಾರ್‌ ಮತ್ತು ಇತರ ನಾಯಕರು ಶರದ್‌ ಪವಾರ್‌ ಅವರನ್ನು ಬೇಟಿಯಾಗಿ ಮಾತುಕತೆ ನಡೆಸಿದ ಬಳಿಕ ನೀಡಿದ ಪ್ರತಿಕ್ರಿಯೆ ಇದು.

Advertisement

ಭಾನುವಾರ ಕೂಡ ಎನ್‌ಸಿಪಿಯ ಭಿನ್ನಮತದ ಗುಂಪಿನ ನಾಯಕರು ಪವಾರ್‌ ಅವರನ್ನು ಭೇಟಿಯಾಗಿದ್ದರು. ಬಳಿಕ ಮಾತನಾಡಿದ ಅಜಿತ್‌ ಪವಾರ್‌ “ಪಕ್ಷವನ್ನು ಏಕೀಕೃತ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು ಎಂಬ ಬಗ್ಗೆ ಅವರ ಬಳಿಯಲ್ಲಿ ಮನವಿ ಮಾಡಿದ್ದೇವೆ. ನಾವು ಹೇಳಿದ್ದನ್ನೆಲ್ಲ ಅವರು ಕೇಳಿಸಿಕೊಂಡರು. ಆದರೆ, ಅವರು ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ, ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಾಗುತ್ತಿಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next